HEALTH TIPS

ಕಡಲ ಹಿತಾಸಕ್ತಿ ರಕ್ಷಣೆ: ಚಿಂತನೆಯ ಮಿತಿಯನ್ನು ಭಾರತ ದಾಟಬೇಕಿದೆ -ಸಚಿವ ಜೈಶಂಕರ್

 

        ಅಹಮದಾಬಾದ್: 'ಪ್ರಸಕ್ತ ಜಾಗತಿಕ ವಿದ್ಯಮಾನಗಳಲ್ಲಿ ಹಿಂದೂಮಹಾಸಾಗರ-ಪೆಸಿಫಿಕ್ ಪ್ರದೇಶ ಎಂಬುದು ವ್ಯೂಹಾತ್ಮಕವಾಗಿ ಹೊಸ ಪರಿಕಲ್ಪನೆಯಾಗಿ ರೂಪುಗೊಳ್ಳುತ್ತಿದೆ' ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್ ಭಾನುವಾರ ಹೇಳಿದರು.

'ಕಡಲಿಗೆ ಸಂಬಂಧಿಸಿದ ಭಾರತದ ಹಿತಾಸಕ್ತಿಯ ಸಂರಕ್ಷಣೆ ಕುರಿತು ಚರ್ಚಿಸುವಾಗ ಪೆಸಿಫಿಕ್‌ ಸಾಗರವನ್ನು ಪ್ರಸ್ತಾಪಿಸದೇ, ಹಿಂದೂಮಹಾಸಾಗರದ ಬಗ್ಗೆ ಮಾತ್ರ ಮಾತನಾಡುವುದನ್ನು ಒಪ್ಪಲಾಗದು. ಈ ರೀತಿಯ ಚರ್ಚೆ ನಮ್ಮ ಚಿಂತನೆಯ ಮಿತಿಯನ್ನು ತೋರುತ್ತದೆ. ಭಾರತವು ಇಂಥ ಮಿತಿಯನ್ನು ದಾಟಬೇಕಿದೆ' ಎಂದು ಅವರು ಹೇಳಿದರು.

             ಗುಜರಾತಿ ಭಾಷೆಗೆ ಅನುವಾದಗೊಂಡಿರುವ ತಮ್ಮ 'ದಿ ಇಂಡಿಯಾ ವೇ: ಸ್ಟ್ರಾಟಜೀಸ್ ಫಾರ್ ಆಯನ್ ಅನ್‌ಸರ್ಟನ್ ವರ್ಲ್ಡ್' ಕೃತಿಯ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

                'ಭಾರತವು ಇತರ ದೇಶಗಳ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಬಾರದು ಎಂಬ ನಂಬಿಕೆ ಆಳವಾಗಿ ಬೇರೂರಿದೆ. ಈ ಧೋರಣೆ ಕೂಡ ಬದಲಾಗಬೇಕು' ಎಂದು ಅವರು ಪ್ರತಿಪಾದಿಸಿದರು.

            'ಹಿಂದೂಮಹಾಸಾಗರ ಹಾಗೂ ಪೆಸಿಫಿಕ್‌ ಸಾಗರದ ನಡುವಿನ ಗೆರೆ ಭೂಪಟದಲ್ಲಿ, ಅಟ್ಲಾಸ್‌ಗಳಲ್ಲಿ ಕಾಣಸಿಗುತ್ತದೆ. ವಾಸ್ತವದಲ್ಲಿ ಅಂಥ ರೇಖೆಯೇ ಇಲ್ಲ. ನಮ್ಮ ಹಿತಾಸಕ್ತಿ ಬದಲಾಗಿದೆ. ಹೀಗಾಗಿ ನಮ್ಮ ಚಿಂತನೆಯೂ ಬದಲಾಗುವುದು ಅಗತ್ಯ' ಎಂದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries