HEALTH TIPS

ಬಾಲಕಿಯರ ಸಾವು ಜಾರ್ಖಂಡ್‌ಗೆ ಭೇಟಿ ನೀಡಲಿರುವ ಎನ್‌ಸಿಪಿಸಿಆರ್‌ ತಂಡ

 

        ರಾಂಚಿ: ಮೇಲಿಂದ ಮೇಲೆ ಬಾಲಕಿಯರ ವಿರುದ್ಧ ಅಪರಾಧ ಘಟನೆಗಳು ನಡೆದ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ‌ವು (ಎನ್‌ಸಿಪಿಸಿಆರ್‌) ಸೋಮವಾರ ಜಾರ್ಖಂಡ್‌ಗೆ ಭೇಟಿ ನೀಡಲಿದೆ.

       ಈ ಕುರಿತು ಮಾತನಾಡಿರುವ ಎನ್‌ಸಿಪಿಸಿಆರ್‌ನ ಮುಖ್ಯಸ್ಥ ಪ್ರಿಯಾಂಕ್‌ ಕಾನೂಂಗೊ, ಈ ಅಪರಾಧ ಪ್ರಕರಣಗಳು ಎಚ್ಚರಿಕೆ ಗಂಟೆಯಾಗಿವೆ.

ಆದ್ದರಿಂದ ತಮ್ಮ ನೇತೃತ್ವದ ತಮ್ಮ ತಂಡ ತನಿಖೆಯ ಸ್ಥಿತಿಯನ್ನು ಪರಿಶೀಲಿಸಲು ಜಾರ್ಖಂಡ್‌ಗೆ ತೆರಳಲಿದೆ ಎಂದು ಹೇಳಿದ್ದಾರೆ.

           'ಸೋಮವಾರದ ಭೇಟಿಯ ವೇಳೆ, ದುಮ್ಕಾದಲ್ಲಿ ನಡೆದ ಇಬ್ಬರು ಬಾಲಕಿಯರ ಸಾವಿನ ಪ್ರಕರಣಗಳ ವಿವರಗಳ ಪ‍ರಿಶೀಲನೆಗೆ ಪೊಲೀಸ್‌ ಅಧಿಕಾರಿಗಳನ್ನು ಭೇಟಿ ಮಾಡಲಾಗುವುದು' ಎಂದು ಕಾನೂಂಗೊ ಹೇಳಿದ್ದಾರೆ.

           ಮದುವೆಯ ನೆಪದಲ್ಲಿ ವ್ಯಕ್ತಿಯೊಬ್ಬನಿಂದ ಲೈಂಗಿಕ ಶೋಷಣೆಗೊಳಗಾದ 14 ವರ್ಷದ ಬುಡಕಟ್ಟು ಬಾಲಕಿಯೊಬ್ಬಳು ಶುಕ್ರವಾರ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪ‍ತ್ತೆಯಾಗಿದ್ದಳು. ಬಾಲಕಿಯ ತಾಯಿ, ತನ್ನ ಮಗಳನ್ನು ಅತ್ಯಾಚಾರ ಮಾಡಿ, ಕೊಲ್ಲಲಾಗಿದೆ ಎಂದು ಆರೋಪಿಸಿದ್ದರು. ಸದ್ಯ ಪ್ರಕರಣದ ಆರೋಪಿ ನಾಪತ್ತೆಯಾಗಿದ್ದಾನೆ.

             ಇದಕ್ಕೂ ಕೆಲವು ದಿನಗಳ ಮುಂಚೆ, ಆಗಸ್ಟ್‌ 23ರಂದು 16 ವರ್ಷದ ಬಾಲಕಿಯೊಬ್ಬಳನ್ನು ವ್ಯಕ್ತಿಯೊಬ್ಬ ಬೆಂಕಿ ಹಚ್ಚಿ ಹತ್ಯೆ ಮಾಡಿದ್ದ. ಈ ಪ್ರಕರಣಕ್ಕೆ ಕನಿಷ್ಠ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries