HEALTH TIPS

ಇಳಂತೂರು ಅಭಿಚಾರ ಹತ್ಯೆ; ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ಪದ್ಮಾ ಪುತ್ರ; ಮೃತದೇಹವನ್ನು ಬಿಡುಗಡೆಗೆ ಮನವಿ


            ತಿರುವನಂತಪುರ: ಇಳಂತೂರಿನ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಗೀಡಾದ ಪದ್ಮಾ ಅವರ ಪುತ್ರ ಮುಖ್ಯಮಂತ್ರಿಗಳಿಗೆ ಅರ್ಜಿ ಸಲ್ಲಿಸಿದ್ದಾರೆ.
           ಪದ್ಮಾ ಅವರ ಪುತ್ರ ಸೆಲ್ವರಾಜ್ ಮುಖ್ಯಮಂತ್ರಿಗಳಿಗೆ ಪತ್ರ ರವಾನಿಸಿದ್ದಾರೆ. ಪದ್ಮಾ ಅವರ ಮೃತದೇಹವನ್ನು ತಡಮಾಡದೆ ಬಿಡುಗಡೆ ಮಾಡಬೇಕು ಹಾಗೂ ಈ ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದ್ದಾರೆ.
           ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಕೊಟ್ಟಾಯಂ ವೈದ್ಯಕೀಯ ಕಾಲೇಜಿನಲ್ಲಿ ಇರಿಸಲಾಗಿದ್ದು 18 ದಿನಗಳು ಕಳೆದಿವೆ ಮತ್ತು ಅವರು ಕೊಚ್ಚಿಯಲ್ಲಿ ಒಂದು ತಿಂಗಳ ಕಾಲ ಇದ್ದಾರೆ ಎಂದು ಪತ್ರದಲ್ಲಿ ಹೇಳಲಾಗಿದೆ. ಕೆಲಸಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ, ಹಣವಿಲ್ಲ ಎಂದು ಸೆಲ್ವರಾಜ್ ಪತ್ರದಲ್ಲಿ ವಿವರಿಸಿದ್ದಾರೆ.
       ಇದಕ್ಕೂ ಮುನ್ನ ಸೆಲ್ವರಾಜ್ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿದ್ದರು. ಪದ್ಮಾ ಅವರ ಕುಟುಂಬದವರು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರಿಗೆ ಪತ್ರವನ್ನೂ ಬರೆದಿದ್ದರು. ಸಂಪ್ರದಾಯದಂತೆ ಶವವನ್ನು ಅಂತ್ಯಸಂಸ್ಕಾರ ಮಾಡುವಂತೆ ಕುಟುಂಬದವರು ಮನವಿ ಮಾಡಿದರು.
    ಕಳೆದ ತಿಂಗಳು ಕೇರಳವನ್ನು ಬೆಚ್ಚಿ ಬೀಳಿಸಿದ ಹತ್ಯೆ ಹೊರಜಗತ್ತಿಗೆ ಬಹಿರಂಗಗೊಂಡಿತ್ತು. ತಮಿಳುನಾಡು ಮೂಲದ ಪದ್ಮ ಹಾಗೂ ಕಾಲಡಿ ಮೂಲದ ರೋಸ್ಲಿನ್ ಎಂಬುವರನ್ನು ಅಪಾರ ಪ್ರಮಾಣದ ಹಣ ನೀಡುವುದಾಗಿ ಹೇಳಿ ಕೊಲೆಗೈಯ್ಯಲಾಗಿತ್ತು.  ಭಗವಾಲ್ ಸಿಂಗ್ ಮತ್ತು ಲೈಲಾ ದಂಪತಿಗಳು ಸಹಚರ ಶಫಿ ಮೂಲಕ ಆಭಿಚಾರ ಕೊಲೆ ನಡೆಸಿದ್ದರು. ಸಂಪತ್ತು ಮತ್ತು ಐಶ್ವರ್ಯ ಪಡೆಯಲು ಕೊಲೆ ಮಾಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries