ಕುಂಬಳೆ: ಭಾರತ ಕಂಡ ಸರ್ವ ಶ್ರೇಷ್ಠ ಕ್ರಿಕೆಟಿಗರಾದ ಅನಿಲ್ ಕುಂಬಳೆಯವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಭೇಟಿಯಾದ ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಜೀರ್ಣೋದ್ದಾರ ಹಾಗೂ ಬ್ರಹ್ಮಕಲಶ ಸಮಿತಿ ಪದಾಧಿಕಾರಿಗಳು ವಿನಂತಿ ಪತ್ರ ಹಸ್ತಾಂತರಿಸಿದರು.
ಸಮಿತಿಯ ಅಧ್ಯಕ್ಷ ಬಿ ರಘುನಾಥ ಪೈ ಅವರು ಸಮಿತಿಯ ಪರವಾಗಿ ವಿನಂತಿಪತ್ರ ನೀಡಿದರು. ಈ ಸಂದರ್ಭದಲ್ಲಿ ಸಮಿತಿಯ ಉಪಾಧ್ಯಕ್ಷ ದಾಮೋದರ ದೇಲಂಪಾಡಿ, ಕೆ.ಸಿ. ಮೋಹನ್, ಕೆ. ಸುಧಾಕರ್ ಕಾಮತ್, ಕಾರ್ಯದರ್ಶಿ ಬಿ ವಿಕ್ರಂ ಪೈ, ಸಲಹಾ ಸಮಿತಿ ಸದಸ್ಯ ವಿ ರವೀಂದ್ರನ್ ಉಪಸ್ಥಿತರಿದ್ದರು. ಅನಿಲ್ ಕುಂಬಳೆಯವರು ಜೀರ್ಣೋದ್ದಾರ ಕಾಮಗಾರಿಗಳ ಕುರಿತು ಈ ಸಂದರ್ಭ ಚರ್ಚಿಸಿದರು.
ಕಣಿಪುರ ಪ್ರತಿನಿಧಿಗಳಿಂದ ಅನಿಲ್ ಕುಂಬಳೆಗೆ ಮನವಿಪತ್ರ ಹಸ್ತಾಂತರ
0
ಅಕ್ಟೋಬರ್ 15, 2022
Tags

.jpg)
