ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದ ಆರೋಗ್ಯ ಯೋಜನೆಯ ವತಿಯಿಂದ ಅ.30 ರಂದು ಭಾನುವಾರ “ಪಾರಂಪರಿಕ ವೈದ್ಯ ಸಂಗಮ”ವನ್ನು ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಆಯೋಜಿಸಲಾಗಿದೆ. ಬೆಳಿಗ್ಗೆ 9.ರಿಂದ ಸಂಜೆ 6. ರ ವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ನಾಟಿ ಔಷಧಿಗಳ ಉಪಯೋಗ, ನಮ್ಮ ಪರಿಸರದ ಔಷಧೀಯ ಗಿಡಮೂಲಿಕೆಗಳ ಪರಿಚಯ, ಸೊಂಟನೋವಿಗೆ ಶಾಶ್ವತ ಪರಿಹಾರ, ಸಿಹಿಮೂತ್ರ ರೋಗ ನಿರ್ವಹಣೆಯಲ್ಲಿ ಆಹಾರದ ಪಾತ್ರ ಹಾಗೂ ಮರ್ಮರೋಗಗಳು ಮತ್ತು ಅವುಗಳಿಗೆ ಚಿಕಿತ್ಸೆ, ಕುರಿತು ಸಂವಾದ ತರಗತಿಗಳು ನಡೆಯಲಿವೆ. ಈ ಕ್ಷೇತ್ರಗಳಲ್ಲಿ ನುರಿತ ಪಾರಂಪರಿಕ ವೈದ್ಯರುಗಳಾದ ರವೀಂದ್ರನ್ ವೈದ್ಯರ್ ತಿರುವನಂತಪುರ, ಅರವಿಂದಾಕ್ಷÀನ್ ವೈದ್ಯರ್ ಕಣ್ಣೂರು, ಹರಿದಾಸನ್ ವೈದ್ಯರ್ ತ್ರಿಶೂರ್, ಏಕಪ್ ವೈದ್ಯರ್ ವಯನಾಡ್ ಮತ್ತು ಅನಿಲ್ ವೈದ್ಯರ್ ವಯನಾಡ್ ರವರುಗಳು ಮಾಹಿತಿ ನೀಡಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರವನ್ನು ಯಶಸ್ವಿಗೊಳಿಸಬೇಕಾಗಿ ಶ್ರೀಮಠದ ಪ್ರಕಟಣೆ ತಿಳಿಸಿದೆ.
ಕೊಂಡೆವೂರಿನಲ್ಲಿ ಪಾರಂಪರಿಕ ವೈದ್ಯ ಸಂಗಮ
0
October 28, 2022
Tags