HEALTH TIPS

ಶ್ರೀನಿವಾಸ್ ಹತ್ಯೆ ಪ್ರಕರಣ; ಪಾಪ್ಯುಲರ್ ಫ್ರಂಟ್ ತಂಡ ಮೊದಲು ಬಿಜೆಪಿ ನಾಯಕನನ್ನು ಗುರಿಯಾಗಿಸಿಕೊಂಡಿತ್ತು: ಪೋಲೀಸರಿಂದ ಮಾಹಿತಿ: ಸಾಕ್ಷ್ಯ ಸಂಗ್ರಹ


            ಪಾಲಕ್ಕಾಡ್: ಆರ್.ಎಸ್.ಎಸ್. ಮುಖಂಡ ಶ್ರೀನಿವಾಸ್ ಕೃಷ್ಣ ಅವರನ್ನು ಕೊಲ್ಲುವ ಮುನ್ನ ಪಾಪ್ಯುಲರ್ ಫ್ರಂಟ್ ಭಯೋತ್ಪಾದಕರು ಜಿಲ್ಲೆಯ ಪ್ರಮುಖ ಬಿಜೆಪಿ ಮುಖಂಡರೊಬ್ಬರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ ಎಂದು ಪೋಲೀಸರು ತಿಳಿಸಿದ್ದಾರೆ.
         ಜುಬೇರ್ ನಿಧನದ ನಂತರ ಒಟ್ಟಪಾಲಂನಿಂದ ಬಿಜೆಪಿ ನಾಯಕನನ್ನು ಕಣಕ್ಕಿಳಿಸುವ ಯೋಜನೆ ನಡೆದಿತ್ತು. ಆದರೆ ಇದು ವಿಫಲವಾದಾಗ ಶ್ರೀನಿವಾಸ್ ಹತ್ಯೆಗೀಡಾಗಿದ್ದಾನೆ ಎಂದು ಪೋಲೀಸರು ತಿಳಿಸಿದ್ದಾರೆ.
         ದಾಳಿಕೋರರ ಗುಂಪು ಬಿಜೆಪಿ ಮುಖಂಡನನ್ನು ಕೊಲ್ಲಲು ಬೆಳಗಿನ ಜಾವ ಮೂರರಿಂದ ಆರು ಗಂಟೆಯವರೆಗೆ ಕಾದು ಕುಳಿತಿತ್ತು. ಆದರೆ ಆ ಸಮಯದಲ್ಲಿ ಅವರು ಲಭಿಸಿರಲಿಲ್ಲ. ಯೋಜನೆ ವಿಫಲವಾಗಿದೆ ಎಂದು ತಿಳಿದ ತಂಡ ನೇರವಾಗಿ ಪಾಲಕ್ಕಾಡ್‍ಗೆ ತೆರಳಿತು. ಪಾಪ್ಯುಲರ್ ಫ್ರಂಟ್ ಉಗ್ರರು ಪ್ರಯಾಣಿಸುತ್ತಿದ್ದ ವಾಹನಗಳ ದೃಶ್ಯಾವಳಿಗಳು ಪೋಲೀಸರಿಗೆ ಸಿಕ್ಕಿವೆ.
         ಶ್ರೀನಿವಾಸನ್ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಪಾಪ್ಯುಲರ್ ಫ್ರಂಟ್ ನಾಯಕ ಕೆ.ಬಶೀರ್ ನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಆತನಿಂದ ಪೋಲೀಸರಿಗೆ ಮಹತ್ವದ ಮಾಹಿತಿ ಸಿಕ್ಕಿದೆ. ಬಶೀರ್ ನನ್ನು ಕೊಲೆಗೈದ ಸ್ಥಳಕ್ಕೆ ಕರೆತಂದು ಸಾಕ್ಷ್ಯ ಸಂಗ್ರಹಿಸಲಾಗಿದೆ. ನಾರ್ಕೋಟಿಕ್ ಸೆಲ್ ಡಿವೈಎಸ್ಪಿ ಎಂ. ಅನಿಲ್ ಕುಮಾರ್ ನೇತೃತ್ವದ ತಂಡ ಸಾಕ್ಷ್ಯಾಧಾರ ತೆಗೆದಿದೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries