ಪತ್ತನಂತಿಟ್ಟ: ಇಳಂತೂರಿನ ಜೋಡಿ ವ್ಯಭಿಚಾರದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡ ಆಘಾತಕಾರಿ ಹೊಸ ಮಾಹಿತಿಯನ್ನು ಹೊರಹಾಕಿದೆ.
ಹತ್ಯೆಯ ನಂತರ ಮಾಂಸವನ್ನು ಮಾರಾಟ ಮಾಡಲು ಯೋಜನೆ ರೂಪಿಸಲಾಗಿತ್ತು ಮತ್ತು ಮಾನವ ಮಾಂಸ-ಅವಯವ ಮಾರಾಟ ಮಾಡಿದರೆ 20 ಲಕ್ಷ ರೂಪಾಯಿವರೆಗೆ ಸಿಗುತ್ತದೆ ಎಂದು ಲೈಲಾ ಮತ್ತು ಭಗವಾಲ್ ಸಿಂಗ್ ಅವರನ್ನು ಶಫಿ ನಂಬಿಸಿದ್ದ ಎಂದು ತನಿಖಾ ತಂಡ ಹೇಳಿದೆ. ಮೃತದೇಹಗಳನ್ನು ಫ್ರಿಡ್ಜ್ ನಲ್ಲಿಟ್ಟು ಮಾರಾಟಕ್ಕೆ ಸಿದ್ದಗೊಳಿಸಿದ್ದರು.
ಅಭಿಚಾರ ಹತ್ಯೆಯ ನಂತರ ಶವವನ್ನು ಸುಟ್ಟು ಹಾಕದೆ ತುಂಡು ತುಂಡಾಗಿ ಕತ್ತರಿಸಿದ್ದೇಕೆ ಎಂಬ ಅನುಮಾನ ತನಿಖಾ ತಂಡಕ್ಕೆ ಇತ್ತು. ಈ ಬಗ್ಗೆ ಆರೋಪಿಯನ್ನು ಕೇಳಿದಾಗ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ಶಾಸ್ತ್ರೋಕ್ತವಾಗಿ ಹತ್ಯೆ ಮಾಡುವ ನಿರ್ಧಾರವನ್ನು ಮೊದಲು ತೆಗೆದುಕೊಂಡವರು ಭಗವಾಲ್ ಸಿಂಗ್. ನಂತರ ಶಫಿಯನ್ನು ಸಂಪರ್ಕಿಸಿದ್ದ.
ಈ ಬಗ್ಗೆ ಮೊದಲು ಮಾತನಾಡಿದವರು ಭಗವಾಲ್ ಸಿಂಗ್. ಪೋಲೀಸರು ನೀಡಿದ ಮಾಹಿತಿ ಪ್ರಕಾರ, ರೋಸ್ಲಿಯನ್ನು ಮಾಂತ್ರಿಕ ಕೊಲೆಗೆ ಕರೆತರಲಾಯಿತು. ಇದಾದ ಬಳಿಕ ಶಫಿ, ಬೆಂಗಳೂರಿನಲ್ಲಿ ಮಾನವ ಮಾಂಸ ಖರೀದಿಸಿ ಸೇವಿಸುವ ದೊಡ್ಡ ಗ್ಯಾಂಗ್ ಕಾರ್ಯನಿರ್ವಹಿಸುತ್ತಿದ್ದು, ಮಾಂಸ ಮಾರಾಟ ಮಾಡಿದರೆ 20 ಲಕ್ಷ ರೂಪಾಯಿ ಪಡೆಯುವುದಾಗಿ ಭಗವಾಲ್ ಸಿಂಗ್ ಮತ್ತು ಆತನ ಪತ್ನಿಗೆ ತಿಳಿಸಿದ್ದಾನೆ. ಈ ಹಣವು ಆರ್ಥಿಕ ಸಮೃದ್ಧಿಯನ್ನು ತರುತ್ತದೆ ಎಂದು ಶಫಿ ನಂಬಿದ್ದ. ಇದರ ಆಧಾರದ ಮೇಲೆ ಮೃತದೇಹಗಳನ್ನು ತುಂಡು ಮಾಡಿ ಫ್ರಿಡ್ಜ್ ನಲ್ಲಿಡಲಾಗಿತ್ತು.
ಶಫಿ ಮರುದಿನ ಶವ ಖರೀದಿಸಲು ಬರುವುದಾಗಿ ತಿಳಿಸಿದ್ದ. ಆದರೆ ಯಾರೂ ಬಂದಿರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ ರೋಸ್ಲಿನ್ ಕೊಲೆಯಾದ ಸಮಯ ಮತ್ತು ರೀತಿ ತಪ್ಪಿದ್ದರಿಂದ ಮಾಂಸ ಕೊಳ್ಳಲು ಯಾರೂ ಬರುವುದಿಲ್ಲ ಎಂದು ಹೇಳಲಾಗಿದೆ. ಇದರ ನಂತರ, ಎರಡನೇ ಹತ್ಯೆಗೆ ಸಿದ್ಧತೆಗಳು ಪ್ರಾರಂಭವಾದವು.
ಇದೇ ವೇಳೆ ಲೈಲಾ ಮತ್ತು ಭಗವಾಲ್ ಸಿಂಗ್ ಇಬ್ಬರ ಕೊಲೆಗೆ ಬೆದರಿಕೆ ಹಾಕುವುದು ಶಫಿಯ ಯೋಜನೆಯಾಗಿತ್ತು. ಭಗವಾಲ್ ಸಿಂಗ್ ಗೆ ಆರ್ಥಿಕ ಸಮೃದ್ಧಿಯ ಭರವಸೆ ನೀಡಿ ಹಲವಾರು ಸಂದರ್ಭಗಳಲ್ಲಿ 6 ಲಕ್ಷ ರೂಪಾಯಿಗಳನ್ನು ಶಫಿ ಪಡೆದಿದ್ದ. ಇದನ್ನು ಹಿಂತಿರುಗಿಸಲು ಭಾವಗಲ್ ಸಿಂಗ್ ಕೇಳಿದ್ದ. ಇದರೊಂದಿಗೆ ಶಫಿ ಹಣವನ್ನು ಹಿಂದಿರುಗಿಸದಿರಲು ಯೋಚಿಸತೊಡಗಿದ್ದ. ಎರಡನೇ ಬಾರಿ ವಾಮಾಚಾರ ಮಾಡಿ ಕೊಲೆ ಮಾಡಿ ಹಣ ವಾಪಸ್ ನೀಡುವುದಿಲ್ಲ ಎಂದು ಬೆದರಿಕೆ ಹಾಕುವುದು ಶಫಿಯ ಯೋಚನೆಯಾಗಿತ್ತು.
ಕೊಲ್ಲುವುದು ಎಂದರೆ ಯಾವುದೇ ಮುಲಾಜುಗಳಿಲ್ಲದೆ ಮಾಡುವ ಪ್ರಕ್ರಿಯೆಯಾಗಿ ಅನುಭವವಾಗಿದ್ದು, ಶವಗಳನ್ನು ಬೇಕಾದಂತೆ ಕತ್ತರಿಸುವ ಕಲೆ ಕರಗತವಾಗಿದೆ ಎಂದು ಶಫಿ ಪೆÇಲೀಸರಿಗೆ ಹೇಳಿಕೆ ನೀಡಿದ್ದಾನೆ.
BREAING: ಕರಾಳ ವ್ಯಾಪಾರ ಬಯಲಿನತ್ತ: ಮಾನವ ಅವಯವ, ಮಾಂಸ ದಂಧೆಯತ್ತ ಅಭಿಚಾರ ಪ್ರಕರಣದ ತಿರುವು: ಆಘಾತಕಾರಿ ಮಾಹಿತಿ
0
October 16, 2022
Tags