HEALTH TIPS

ಬೈಕ್ ವಶಪಡಿಸಿ ಕೀಲಿಕೈ ತೆಗೆದಿರಿಸಿದ ಪೋಲೀಸ್: ಕೈತಪ್ಪಿದ ಪಿ.ಎಸ್.ಸಿ ಪರೀಕ್ಷೆ: ಮಾನವ ಹಕ್ಕುಗಳ ಆಯೋಗದಿಂದ ಪೋಲೀಸ್ ಅಧಿಕಾರಿಗೆ ಖುದ್ದು ಹಾಜರಾಗುವಂತೆ ಸೂಚನೆ


         ಕೋಝಿಕ್ಕೋಡ್ : ಪಿಎಸ್ ಸಿ ಪರೀಕ್ಷೆ ಬರೆಯಲು ತೆರಳುತ್ತಿದ್ದ ಯುವಕನೊಬ್ಬನನ್ನು ಪೋಲೀಸರು ವಶಕ್ಕೆ ಪಡೆದ ಪ್ರಕರಣದಲ್ಲಿ ಮಾನವ ಹಕ್ಕುಗಳ ಆಯೋಗ ಮಧ್ಯ ಪ್ರವೇಶಿಸಿದೆ.
           ಸಂಚಾರ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ರಾಮನಾಟುಕರ ಮೂಲದ ಅರುಣ್ ಅವರನ್ನು ಫಾರೋಕ್ ಪೋಲೀಸ್ ಠಾಣೆಯ ಹಿರಿಯ ಸಿಪಿಒ ರಂಜಿತ್ ಪ್ರಸಾದ್ ತಡೆದಿದ್ದರು. ಪ್ರಕರಣಕ್ಕೆ ಸಂಬಂಧಿಸಿದ ಘಟನೆ ಕಳೆದ 22ರಂದು ನಡೆದಿತ್ತು. ಪಿಎಸ್‍ಸಿ ಪೂರ್ವಭಾವಿ ಪರೀಕ್ಷೆಗೆ ಹಾಜರಾಗಲು ತೆರಳಿದ್ದ ಅರುಣ್‍ನನ್ನು ಸಂಚಾರಿ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಪೋಲೀಸರು ವಶಕ್ಕೆ ಪಡೆದಿದ್ದಾರೆ. ಅರುಣ್ ನ ಬೈಕ್ ಕೀಲಿಕೈಯನ್ನೂ ಅಧಿಕಾರಿ ತೆಗೆದಿರಿಸಿದ್ದರು.
       ಕೊನೆಗೆ ಎಸ್‍ಐ ನೆರವಿನಿಂದ ಪರೀಕ್ಷಾ ಕೇಂದ್ರ ತಲುಪಿದರೂ ಆಗಲೇ ಪರೀಕ್ಷೆ ಆರಂಭವಾಗಿತ್ತು. ಪೋಲೀಸರು ತಡೆದ ಕಾರಣಕ್ಕೆ ಅರುಣ್ ಪರೀಕ್ಷೆ ಬರೆಯುವ ಅವಕಾಶ ಕಳೆದುಕೊಂಡರು. ಈ ಬಗ್ಗೆ ಮಾಧ್ಯಮಗಳಲ್ಲಿ ಬಂದ ಸುದ್ದಿ ಆಧರಿಸಿ ಮಾನವ ಹಕ್ಕುಗಳ ಆಯೋಗ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿದೆ. ಘಟನೆ ಕುರಿತು ವಿವರಣೆ ನೀಡಲು ನೇರವಾಗಿ ಪೋಲೀಸ್ ಅಧಿಕಾರಿಗೆ ಹಾಜರಾಗುವಂತೆ ಸೂಚಿಸಲಾಗಿದೆ.
         ಅ..29ರಂದು ಬೆಳಗ್ಗೆ 10.30ಕ್ಕೆ ಕೋಝಿಕ್ಕೋಡ್ ಕಲೆಕ್ಟರೇಟ್ ಕಾನ್ಫರೆನ್ಸ್ ಹಾಲ್ ನಲ್ಲಿ ನಡೆಯುವ ಪರೀಕ್ಷೆಗೆ ರಂಜಿತ್ ಪ್ರಸಾದ್ ಖುದ್ದು ಹಾಜರಾಗುವಂತೆ ಸೂಚಿಸಲಾಗಿತ್ತು. ಆಯೋಗದ ನ್ಯಾಯಾಂಗ ಸದಸ್ಯ ಕೆ. ಬೈಜುನಾಥ್ ಅವರು ಫಾರೂಕ್ ಸಹಾಯಕ ಪೋಲೀಸ್ ಆಯುಕ್ತರಿಗೆ ನೋಟಿಸ್ ನೀಡಿದ್ದಾರೆ. ಅರುಣ್ ಅವರ ದೂರಿನ ಬಗ್ಗೆ ಫಾರೂಕ್ ಸಹಾಯಕ ಆಯುಕ್ತರು ಪ್ರಾಮಾಣಿಕ ತನಿಖೆ ನಡೆಸಬೇಕು ಎಂದೂ ಆಯೋಗದ ಆದೇಶದಲ್ಲಿ ಹೇಳಲಾಗಿದೆ. 15 ದಿನದೊಳಗೆ ವಿಚಾರಣೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಫಾರೂಕ್ ಎಸಿಪಿಗೆ ಅರುಣ್ ನೀಡಿದ ದೂರಿನ ಆಧಾರದ ಮೇಲೆ ರಂಜಿತ್ ಪ್ರಸಾದ್ ಅವರನ್ನು ಅಮಾನತುಗೊಳಿಸಲಾಗಿದೆ.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries