HEALTH TIPS

ಆಭಿಚಾರ ಹತ್ಯೆ ಪ್ರಕರಣ: ಕೊಲ್ಲಲ್ಪಟ್ಟವರು ಪದ್ಮ ಮತ್ತು ರೋಸ್ಲಿ ಎಂದು ಖಚಿತಪಡಿಸಿದ ಡಿಎನ್ಎ ಫಲಿತಾಂಶ


            ಪತ್ತನಂತಿಟ್ಟ: ಇಳಂತೂರಲ್ಲಿ ಅಭಿಚಾರ ಹತ್ಯೆಗೆ ಒಳಗಾದವರು ತಮಿಳುನಾಡು ಮೂಲದ ಪದ್ಮಾ ಮತ್ತು ಕಾಲಡಿ ನಿವಾಸಿ ರೋಸ್ಲಿ ಎಂದು ದೃಢಪಟ್ಟಿದೆ.
        ತಿರುವನಂತಪುರಂ ಫೋರೆನ್ಸಿಕ್ ಲ್ಯಾಬ್‍ನಲ್ಲಿ ನಡೆಸಿದ ಡಿಎನ್‍ಎ ಪರೀಕ್ಷೆಯಲ್ಲಿ ಮೃತ ದೇಹಗಳು ಪದ್ಮಾ ಮತ್ತು ರೋಸ್ಲಿ ಅವರದ್ದು ಎಂದು ದೃಢಪಟ್ಟಿದೆ. ತನಿಖಾ ತಂಡ ಇಂದು ವರದಿ ಪಡೆಯಲಿದೆ.
          ಪ್ರಸ್ತುತ, ಮೃತ ದೇಹಗಳನ್ನು ಕೊಟ್ಟಾಯಂ ವೈದ್ಯಕೀಯ ಕಾಲೇಜಿನಲ್ಲಿ ಇರಿಸಲಾಗಿದೆ. ವರದಿ ಬಂದ ತಕ್ಷಣ ಇವುಗಳನ್ನು ಸಂಬಂಧಿಕರಿಗೆ ನೀಡಲಾಗುವುದು. 
         ಪತ್ತೆಯಾದವರಲ್ಲಿ ಬೇರೆ ಯಾವುದಾದರೂ ಮೃತದೇಹಗಳಿವೆ ಎಂದು ಪೋಲೀಸರು ಶಂಕಿಸಿದ್ದರು. ಆದರೆ ಡಿಎನ್‍ಎ ಫಲಿತಾಂಶದೊಂದಿಗೆ ಮೃತದೇಹ ಇಬ್ಬರದ್ದು ಎಂಬುದು ದೃಢಪಟ್ಟಿದೆ. ಒಂದು ತಿಂಗಳ ಹಿಂದೆ ದೇಹದ ಭಾಗಗಳನ್ನು ಡಿಎನ್‍ಎ ಪರೀಕ್ಷೆಗೆ ಕಳುಹಿಸಲಾಗಿತ್ತು.
         ಇದೇ ವೇಳೆ ಪದ್ಮಾ ಅವರ ಕುಟುಂಬ ಸರ್ಕಾರದ ವಿರುದ್ಧ ಟೀಕೆಗೆ ಮುಂದಾಯಿತು. ಸರಕಾರದಿಂದ ಯಾವುದೇ ನೆರವು ಸಿಕ್ಕಿಲ್ಲ. ತಮಿಳುನಾಡಿನಿಂದ ಬಂದು ಕೇರಳದಲ್ಲಿರಲು ತೊಂದರೆಯಾಗುತ್ತಿದೆ.  ಜನ್ಮ ನೀಡಿದ ತಾಯಿಯ ಅಂತಿಮ ಸಂಸ್ಕಾರ ಮಾಡಲು ಕೂಡ ಸಾಧ್ಯವಾಗುತ್ತಿಲ್ಲ. ಮೃತದೇಹ ಬಿಡುಗಡೆಗೆ ಆಗ್ರಹಿಸಿ ಒಂದು ತಿಂಗಳಿಗೂ ಹೆಚ್ಚು ಕಾಲ ಕೊಚ್ಚಿಯಲ್ಲೇ ವಾಸ್ತವ್ಯ ಹೂಡಿರುವುದರಿಂದ ಕೆಲಸವನ್ನೂ ಕಳೆದುಕೊಂಡಿದ್ದೇನೆ ಎಂಬುದು ಪದ್ಮಾ ಅವರ ಪುತ್ರ ಟೀಕಿಸಿದ್ದ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries