HEALTH TIPS

ಪೋಲೀಸ್ ಅಧಿಕಾರಿಗಳ ಅವಮಾನಕರ ವರ್ತನೆ; ಟೀಕೆ ವ್ಯಕ್ತಪಡಿಸಿದ ಮುಖ್ಯಮಂತ್ರಿ


           ಕೊಚ್ಚಿ: ಪೋಲೀಸರ ಸರಿಯಾದ ಸದ್ಗುಣಗಳನ್ನು ಎತ್ತಿ ಹಿಡಿಯದವರು ಪೋಲೀಸ್ ವ್ಯವಸ್ಥೆಯ ಭಾಗವಾಗಬಾರದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
       ತಮ್ಮ ದುರ್ವರ್ತನೆಗಳ ಮೂಲಕ ಕೆಲವರು ಪೋಲೀಸ್ ಇಲಾಖೆಗೇ ಅವಮಾನರಾಗಿದ್ದಾರೆ. ಇತ್ತೀಚಿಗೆ ನಡೆದ ಚಿನ್ನದ ಸರ ಕಳ್ಳತನಕ್ಕೆ ಸಂಬಂಧಿಸಿದ ಘಟನೆಗಳನ್ನು ಪರೋಕ್ಷವಾಗಿ ಟೀಕಿಸಿ ಮುಖ್ಯಮಂತ್ರಿಗಳು ಹೇಳಿಕೆ ನೀಡಿದ್ದಾರೆ.
         ಕೆಲ ಪೋಲೀಸ್ ಅಧಿಕಾರಿಗಳ ವರ್ತನೆ ನಾಚಿಕೆಗೇಡು. ಪ್ರತ್ಯೇಕ ಘಟನೆಗಳನ್ನು ಸಮುದಾಯವು ಗಂಭೀರವಾಗಿ ಗಮನಿಸುತ್ತಿದೆ. ಇದು ಪೋಲೀಸರ ಪ್ರತಿಷ್ಠೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಪೋಲೀಸರ ಸರಿಯಾದ ಸದ್ಗುಣಗಳನ್ನು ಎತ್ತಿ ಹಿಡಿಯಲು ಸಾಧ್ಯವಾಗದವರು ಪೋಲೀಸ್ ಸೇವೆಯಲ್ಲಿರಲು ಸಾಧ್ಯವಿಲ್ಲ ಎಂಬ ನಿಲುವು ತಳೆಯಬೇಕು. ಆಗ ಎಲ್ಲರೂ ನಿರ್ಭಯವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಬಹುದು. ಸರ್ಕಾರ ಎಲ್ಲರನ್ನೂ ಸಂರಕ್ಷಿಸುವ ಹೊಣೆ ಹೊಂದಿದೆ ಎಂದು ಪಿಣರಾಯಿ ವಿಜಯನ್ ಹೇಳಿದರು.
          ಕೊಟ್ಟಾಯಂ ಕಾಂಜಿರಪಳ್ಳಿಯಲ್ಲಿ ಕಳವು, ಕೊಚ್ಚಿಯಲ್ಲಿ ಚಿನ್ನದ ಸರ ಕಳವು, ಕಿಲಿಕೊಲ್ಲೂರಿನಲ್ಲಿ ನಕಲಿ ಪ್ರಕರಣದಲ್ಲಿ ಯೋಧನಿಗೆ ಥಳಿಸಿದ ಘಟನೆ ಗೃಹ ಇಲಾಖೆಗೆ ಮುಜುಗರ ಉಂಟು ಮಾಡಿದೆ.




 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries