HEALTH TIPS

ಪಾಪ್ಯುಲರ್ ಫ್ರಂಟ್ ಅಪರಾಧಿಗಳ ಪರ ವಾದಮಂಡಿಸಲು ಒಲ್ಲೆಯೆಂದ ವಕೀಲರು: ರಂಜಿತ್ ಶ್ರೀನಿವಾಸನ್ ಹತ್ಯೆ ಪ್ರಕರಣದ ವಿಚಾರಣೆ ಜಿಲ್ಲೆಯಿಂದ ಹೊರಗೆ ಸ್ಥಳಾಂತರಿಸಲು ಆರೋಪಿಗಳಿಂದ ಸುಪ್ರೀಂಗೆ ಅರ್ಜಿ


               ನವದೆಹಲಿ: ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ರಂಜಿತ್ ಶ್ರೀನಿವಾಸನ್ ಹತ್ಯೆ ಪ್ರಕರಣದ ವಿಚಾರಣೆಯನ್ನು ಆಲಪ್ಪುಳ ಜಿಲ್ಲೆಯಿಂದ ಹೊರಗೆ ಸ್ಥಳಾಂತರಿಸಬೇಕು ಎಂದು ಆರೋಪಿಗಳು ಒತ್ತಾಯಿಸಿದ್ದಾರೆ.
           ಆರೋಪಿಗಳಾದ 15 ಪಾಪ್ಯುಲರ್ ಫ್ರಂಟ್ ಭಯೋತ್ಪಾದಕರು ಸುಪ್ರೀಂ ಕೋರ್ಟ್‍ನಲ್ಲಿ ವರ್ಗಾವಣೆ ಅರ್ಜಿ ಸಲ್ಲಿಸಿದ್ದರು. ಆಲಪ್ಪುಳ ನ್ಯಾಯಾಲಯದಲ್ಲಿರುವ ವಕೀಲರು ತಮ್ಮ ಪರವಾಗಿ ಹಾಜರಾಗುತ್ತಿಲ್ಲ ಎಂಬ ಕಾರಣಕ್ಕೆ ಪ್ರಕರಣವನ್ನು ಬೇರೆ ಜಿಲ್ಲೆಗೆ ವರ್ಗಾಯಿಸುವಂತೆ ಮನವಿ ಮಾಡಿದ್ದಾರೆ.
                  ರಂಜಿತ್ ಶ್ರೀನಿವಾಸನ್ ಅವರು ಅಲಪ್ಪುಳ ಬಾರ್‍ನಲ್ಲಿ ವಕೀಲರಾಗಿದ್ದರು. ಆಲಪ್ಪುಳ ನ್ಯಾಯಾಲಯದ ವಕೀಲರು ಹತ್ಯೆಯನ್ನು ಪ್ರತಿಭಟಿಸಿ ಪ್ರಕರಣದ ಆರೋಪಿಗಳ ಪರವಾಗಿ ಹಾಜರಾಗುವುದಿಲ್ಲ ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳು ಪ್ರಕರಣವನ್ನು ಬೇರೆ ಜಿಲ್ಲೆಗೆ ವರ್ಗಾಯಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ನಂತರ ಹೈಕೋರ್ಟ್ ಪ್ರಕರಣವನ್ನು ಮಾವೇಲಿಕ್ಕರ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾಯಿಸಿತು.
       ಆದರೆ ಮಾವೇಲಿಕರ ನ್ಯಾಯಾಲಯವು ಅಲಪ್ಪುಳ ಜಿಲ್ಲೆಯ ಒಂದು ಭಾಗವಾಗಿದೆ ಆದ್ದರಿಂದ ಅದನ್ನು ಬೇರೆ ಜಿಲ್ಲೆಗೆ ವರ್ಗಾಯಿಸಲು ಸುಪ್ರೀಂ ಕೋರ್ಟ್‍ಗೆ ಮೊರೆ ಹೋಗಿತ್ತು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries