HEALTH TIPS

ರಾಜ್ಯಪಾಲರಿಂದ ವಿಸಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ: 12ಕ್ಕೆ ಹಾಜರಾಗಲು ಪತ್ರ


          ತಿರುವನಂತಪುರ: ರಾಜ್ಯಪಾಲರಿಂದ ಶೋಕಾಸ್ ನೋಟಿಸ್ ಜಾರಿಯಾಗಿರುವ ರಾಜ್ಯದ ವಿಸಿಗಳ ವಿಚಾರಣೆ ಡಿ.12ರಂದು ನಡೆಯಲಿದೆ.
           ವಿಸಿಗಳು ಬೆಳಗ್ಗೆ 11 ಗಂಟೆಗೆ ಹಾಜರಾಗುವಂತೆ ರಾಜಭವನ ಪತ್ರ ನೀಡಿದೆ. ಒಂಬತ್ತು ಉಪಕುಲಪತಿಗಳಿಗೆ ವಿಚಾರಣೆಗೆ ಸಮನ್ಸ್ ನೀಡಲಾಗಿದೆ. ವೈಯಕ್ತಿಕವಾಗಿ ಹಾಜರಾಗುವ ಬದಲು ವಕೀಲರನ್ನು ನಿಯೋಜಿಸಬಹುದು.
           ರಾಜ್ಯದಲ್ಲಿ ವಿಶ್ವವಿದ್ಯಾನಿಲಯಗಳ ಕುಲಪತಿಗಳ ನೇಮಕಕ್ಕೆ ಸಂಬಂಧಿಸಿದಂತೆ ಸರ್ಕಾರ ಹೋರಾಟ ಮುಂದುವರೆಸಿರುವಾಗಲೇ ರಾಜಭವನ ಶೋಕಾಸ್ ನೋಟಿಸ್ ನೀಡಿರುವ ವಿಸಿಗಳಿಗೆ ವಿವರಣೆ ನೀಡುವಂತೆ ಸೂಚಿಸಿದೆ. ಇದಕ್ಕಾಗಿ ಡಿ.12 ರಂದು ರಾಜಭವಕ್ಕೆ ಆಗಮಿಸುವಂತೆ ವಿವಿಗಳಿಗೆ ಸೂಚನೆ ನೀಡಲಾಗಿದೆ. ಕೆಟಿಯು ಮತ್ತು ಮೀನುಗಾರಿಕೆಯ ಮಾಜಿ ವಿಸಿಗಳನ್ನು ಹೊರತುಪಡಿಸಿ ಎಲ್ಲರಿಗೂ ಪತ್ರ ಕಳುಹಿಸಲಾಗಿದೆ. ಶೋಕಾಸ್ ನೋಟಿಸ್ ಪ್ರಶ್ನಿಸಿ ಅವರು ಹೈಕೋರ್ಟ್‍ಗೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ಶುಕ್ರವಾರ ನಡೆಯುತ್ತಿರುವಂತೆ  ರಾಜ್ಯಪಾಲರ ಈ ಸೂಚನೆ ಬಂದಿದೆ.
          ಅರ್ಜಿ ಇತ್ಯರ್ಥವಾಗುವವರೆಗೆ ಮೇಲಿನ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಹೈಕೋರ್ಟ್ ಸೂಚನೆ ನೀಡಿದೆ. ನ್ಯಾಯಾಲಯದ ಕಲಾಪಗಳನ್ನು ನೋಡಿಕೊಂಡು ವಿಶ್ವವಿದ್ಯಾಲಯಗಳಲ್ಲಿ ವಿಸಿಗಳ ನೇಮಕವನ್ನು ಮುಂದುವರಿಸಲು ರಾಜ್ಯಪಾಲರು ಕ್ರಮಕೈಗೊಳ್ಳುತ್ತಿದ್ದಾರೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries