HEALTH TIPS

ಕಂಠಪ್ಪಾಡಿ ಕಿರುಷಷ್ಠೀ ಮಹೋತ್ಸವ ಸಂಪನ್ನ


        ಬದಿಯಡ್ಕ: ನೀರ್ಚಾಲು ಸಮೀಪದ ಶ್ರೀ ಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನ, ಕುಕ್ಕಂಕೂಡ್ಲಲ್ಲಿ ಕಿರುಷಷ್ಠಿ ಮಹೋತ್ಸವ ಇತ್ತೀಚೆಗೆ ಬ್ರಹ್ಮಶ್ರೀ ಗಣೇಶ ತಂತ್ರಿಗಳ ನೇತೃತ್ವದಲ್ಲಿ ಸಂಪನ್ನಗೊಂಡಿತು.



        ಡಿ.28 ರಂದು ಬೆಳಿಗ್ಗೆ 6 ಕ್ಕೆ ಗಣಪತಿ ಹವನ, 7 ಕ್ಕೆ ದೀಪ ಪ್ರತಿಷ್ಠೆ, ಉಷಃಪೂಜೆ, 9 ರಿಂದ ಭಜನಾ ಕಾರ್ಯಕ್ರಮ ನಡೆಯಿತು. ಶ್ರೀ ಚಾಮುಂಡೇಶ್ವರಿ ಭಜನಾ ಸಂಘ. ಕಜಳ, ಶ್ರೀಅಯ್ಯಪ್ಪ ಮಹಿಳಾ ಭಜನಾ ಸಂಘ.ಬದಿಯಡ್ಕ ತಂಡದವರು ಭಜನಾ ಸಂಕೀರ್ತನೆ ನಡೆಸಿದರು. 11 ರಿಂದ ಮಂಗಳೂರು ಹರಿಕಥಾ ಪರಿಷತ್ತಿನ ಆಶ್ರಯದಲ್ಲಿ ಪಿ.ವಿ.ರಾವ್ .ಸುರತ್ಕಲ್ ಅವರಿಂದ ಹರಿಕಥಾ ಶ್ರವಣ ‘ಭಕ್ತ ಕುಚೇಲ’ ಪ್ರಸ್ತುತಿಗೊಂಡಿತು. ಹಿಮ್ಮೇಳದಲ್ಲಿ ಮನೋಹರ ರಾವ್ ಮಂಗಳೂರು, ರಮೇಶ ಹೆಬ್ಬಾರ್ ಮಂಗಳೂರು ಸಹಕರಿಸಿದರು. 11. 30 ರಿಂದ ನವಕಾಭಿಷೇಕ, 12 ರಿಂದ ತುಲಾಭಾರ ಸೇವೆಗಳು, 12.30 ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು.  


         ಸಂಜೆ .5.30 ರಿಂದ ಶ್ರೀ ಮಹಾಗಣಪತಿ ಭಜನಾ ಮಂಡಳಿ.ಮಧೂರು ಇವರಿಂದ ಭಜನೆ ನಡೆಯಿತು. 6 ರಿಂದ ಶ್ರೀ ರಕ್ತೇಶ್ವರೀ ತಂಬಿಲ ಸೇವೆ ನಡೆಯಿತು. 7.30 ರಿಂದ ಊರ ಬಾಲಕಲಾವಿದರಿಂದ ನೃತ್ಯ ಪ್ರದರ್ಶನ ನಡೆಯಿತು. ರಾತ್ರಿ 8 ಕ್ಕೆ ಏಣಿಯರ್ಪು ಕೋದಂಬರತ್ ತರವಾಡಿನಿಂದ ಶ್ರೀ ವಿಷ್ಣುಮೂರ್ತಿ ಭಂಡಾರ ಆಗಮನ, ತೊಡಙಲ್, ರಾತ್ರಿ  9.30.ಕ್ಕೆ ರಾತ್ರಿಯ ಪೂಜೆ, ಪ್ರಸಾದ ವಿತರಣೆ ನಡೆಯಿತು. 29 ರಂದು ಬೆಳಿಗ್ಗೆ 7.30 ಕ್ಕೆ  ಬೆಳಗಿನ ಪೂಜೆ, 10.30 ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಕೋಲ ಮತ್ತು ಪ್ರಸಾದ ವಿತರಣೆ ನಡೆಯಿತು.  ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆದು ಭಂಡಾರ ಎಣಿಯರ್ಪು ತರವಾಡಿಗೆ ಹಿಂತಿರುಗುವುದರೊಂದಿಗೆ ಕಿರುಷಷ್ಠಿ ಉತ್ಸವ ಸಂಪನ್ನಗೊಂಡಿತು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries