HEALTH TIPS

ಆರ್ ಬಿ ಐನಿಂದ ರೆಪೊ ದರ ಏರಿಕೆ, ಸಾಲ ಮತ್ತಷ್ಟು ದುಬಾರಿ!

                ಮುಂಬೈ:ಭಾರತೀಯ ರಿಸರ್ವ್ ಬ್ಯಾಂಕ್(RBI) ರೆಪೊ ದರವನ್ನು ತಕ್ಷಣದಿಂದ ಶೇ.0.35ರಷ್ಟು ಹೆಚ್ಚಿಸಿದೆ. ರೆಪೊ ದರವನ್ನು 36 ಮೂಲಾಂಶ, ಅಂದರೆ ಶೇ.6.25ಕ್ಕೆ ಹೆಚ್ಚಿಸಲು ಆರ್ ಬಿಐನ ಹಣಕಾಸು ನೀತಿ ಸಮಿತಿ(ಎಂಪಿಸಿ)ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಆರ್ ಬಿ ಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

                   ಆರ್ ಬಿ ಐ ಈಗಾಗಲೇ ರೆಪೊ ದರವನ್ನು ಮೂರು ಬಾರಿ ಶೇ.0.50ರಷ್ಟು ಹೆಚ್ಚಿಸಿದೆ. ಚಿಲ್ಲರೆ ಹಣದುಬ್ಬರವು ಕಡಿಮೆ ಆಗುತ್ತಿರುವುದರಿಂದ ಹಾಗೂ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುವ ಸಲುವಾಗಿ ರೆಪೊ ದರವನ್ನು ಶೇ.0.25ರಿಂದ ಶೇ.0.35ರ ತನಕ ಹೆಚ್ಚಿಸಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

                   ಈ ದರ ಏರಿಕೆಯಿಂದ ವಿವಿಧ ಸಾಲಗಳ ಮೇಲಿನ ಬಡ್ಡಿ ದರ ಕೂಡ ಹೆಚ್ಚಾಗಲಿದೆ. ಠೇವಣಿ ಸೌಲಭ್ಯಗಳ ಮೇಲಿನ ದರವನ್ನು ಕೂಡ ಹೆಚ್ಚಿಸಲಾಗಿದೆ.   ವರ್ಷದ ಕಡೆಯ ಎಂಪಿಸಿ ಸಭೆ ಆಗಿದೆ.

               ಕಳೆದ ಏಪ್ರಿಲ್​ನಲ್ಲಿ ಹಣ ದುಬ್ಬರ ಪ್ರಮಾಣ ಶೇ.7.79ಕ್ಕೆ ಏರಿದ್ದರಿಂದ ಪದಾರ್ಥಗಳ ಬೆಲೆ ಅಧಿಕವಾಯಿತು. ಈ ಹಿನ್ನೆಲೆಯಲ್ಲಿ ಮೇ ತಿಂಗಳಲ್ಲಿ ನಡೆದ ಎಂಪಿಸಿ ಸಭೆ ರೆಪೊ ದರವನ್ನು 40 ಮೂಲಾಂಶ ಹಿಗ್ಗಿಸಿತು. ಆದರೂ ಹಣದುಬ್ಬರದಲ್ಲಿ ಸುಧಾರಣೆ ಕಾಣದ ಕಾರಣ ಜೂನ್, ಆಗಸ್ಟ್ ಮತ್ತು ಸೆಪ್ಟೆಂಬರ್​ನಲ್ಲಿ ಮತ್ತೆ ತಲಾ 50 ಮೂಲಾಂಶವನ್ನು ಆರ್​ಬಿಐ ಏರಿಕೆ ಮಾಡಿತು. ತತ್ಪರಿಣಾಮ ಅಕ್ಟೋಬರ್​ನಲ್ಲಿ ಹಣದುಬ್ಬರದ ಪ್ರಮಾಣ ಶೇ. 6.77ಕ್ಕೆ ಇಳಿದಿದೆ. ಆರ್​ಬಿಐ ಅಂದಾಜಿನಂತೆ ಇದು ಶೇ.6ರೊಳಗೆ ಇರಬೇಕು.

                 ರೆಪೊ ದರ ಹೆಚ್ಚಳ ಪರಿಣಾಮ ಮೇ ತಿಂಗಳವರೆಗೆ ಶೇ.4.4 ಇದ್ದ ರೆಪೊ ದರ, ಸೆಪ್ಟೆಂಬರ್ ಮಾಹೆಯಲ್ಲಿ ಶೇ.5.9ಕ್ಕೆ ಜಿಗಿಯಿತು. ಇದರಿಂದ ಬ್ಯಾಂಕ್​ಗಳು ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಇನ್ನಿತರ ಸಾಲಗಳ ಮೇಲಿನ ಬಡ್ಡಿ ದರ ಹೆಚ್ಚಳ ಮಾಡಿವೆ. ಇದು ಗ್ರಾಹಕರ ಇಎಂಐ ಮೇಲೆ ಪರಿಣಾಮಬೀರಿದೆ. ರೆಪೊ ದರ ಏರಿದಷ್ಟು ಆರ್ಥಿಕತೆಯ ವೇಗ ಕಡಿಮೆ ಆಗುತ್ತದೆ ಎಂಬುದು ತಜ್ಞರ ಅಭಿಪ್ರಾಯ.

                                          ಸಿಎನ್​ಜಿ ಮೇಲೆ ಅಬಕಾರಿ ತೆರಿಗೆ ತಗ್ಗಿಸಲು ಶಿಫಾರಸು

                  ಸಾಂದ್ರೀಕೃತ ನೈಸರ್ಗಿಕ ಅನಿಲ (ಸಿಎನ್​ಜಿ) ಮೇಲಿನ ಅಬಕಾರಿ ಸುಂಕ ಕಡಿಮೆ ಮಾಡುವಂತೆ ಮತ್ತು ಸಿಎನ್​ಜಿಯನ್ನು ಜಿಎಸ್​ಟಿ ವ್ಯಾಪ್ತಿಗೆ ತರುವಂತೆ ಕೀರ್ತಿ ಪಾರಿಖ್ ನೇತೃತ್ವದ ಸಮಿತಿ ಶಿಫಾರಸು ಮಾಡಿದೆ. ಸಿಎನ್​ಜಿ ಪರಿಸರಸ್ನೇಹಿ ಇಂಧನವಾಗಿದೆ. ಜತೆಗೆ ನೈಸರ್ಗಿಕ ತೈಲದ ಮೇಲೆ ಯಾವುದೇ ಅಬಕಾರಿ ಸುಂಕ ಇಲ್ಲದಿರುವಾಗ ಸಿಎನ್​ಜಿ ಮೇಲೆ ಶೇ.14 ಅಬಕಾರಿ ಸುಂಕ ಹೇರಿರುವುದು ತರವಲ್ಲ ಎಂದು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಅಭಿಪ್ರಾಯಪಟ್ಟಿದೆ. ಕೇಂದ್ರದ ಈ ತೆರಿಗೆಯ ಜತೆಗೆ ರಾಜ್ಯಗಳ ವ್ಯಾಟ್ ಸುಂಕ ಶೇ.24.5 ಇದೆ ಎಂದು ಹೇಳಿದೆ. ಮಾರುಕಟ್ಟೆ ಆಧಾರಿತ, ಪಾರದರ್ಶಕ ಮತ್ತು ವಿಶ್ವಾಸಾರ್ಹ ದರ ಪರಿಷ್ಕರಣೆ ಕುರಿತು ವರದಿ ನೀಡುವಂತೆ ಸಮಿತಿಯನ್ನು ಪೆಟ್ರೋಲಿಯಂ ಸಚಿವಾಲಯ ನೇಮಿಸಿತ್ತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries