HEALTH TIPS

ರೇಬೀಸ್ ಶಿಬಿರದಲ್ಲೇ ನಾಯಿ ದಾಳಿ; ಶ್ವಾನ ಪ್ರಿಯರಿಗೆ ಶಾಕ್​..!

 

                ತಮಿಳುನಾಡು: ಸಮಸ್ಯೆಗೆ ಪರಿಹಾರ ನೀಡುವಾಗ ಆ ಸಮಸ್ಯೆಯೇ ಉಲ್ಬಣಿಸಿದರೆ ಹೇಗಾಗಬಹುದು? ಅಂತಹದೇ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

                  ರೇಬೀಸ್ ಶಿಬಿರದ ವೇಳೆ ದಾಳಿ ಮಾಡಿದ ನಾಯಿ ಹುಚ್ಚೆದ್ದು ಶಿಬಿರಕ್ಕೆ ಬಂದಿದ್ದ ನಾಯಿಗಳನ್ನ ಕಚ್ಚಿ ದಾಂಧಲೆ ಮಾಡಿದೆ.ತಮಿಳುನಾಡಿನ ಕೃಷ್ಣಗಿರಿಯ ಪಿಆರ್​ಸಿ ಶಾಲಾ ಆವರಣದಲ್ಲಿ ಈ ವಿಚಿತ್ರ ಘಟನೆ ನಡೆದಿದೆ.

                ಶಿಬಿರದಲ್ಲಿ ಸಾಕಷ್ಟು ಜನ ಸಾಕು ನಾಯಿಗಳನ್ನ ಕರೆತಂದಿದ್ದರು. ಈ ಸಂದರ್ಭ ಲಸಿಕೆ ಹಾಕಲು ತಂದಿದ್ದ ನಾಯಿ ಹುಚ್ಚೆದ್ದು ರಂಪಾಟ ಮಾಡಿ ಶ್ವಾನ ಪ್ರಿಯರಿಗೆ ಶಾಕ್​ ನೀಡಿದೆ. ಅಲ್ಲಿದ್ದ ಇತರೆ ನಾಯಿಗಳನ್ನು ಹಾಗೂ ಜನರನ್ನು ಕಚ್ಚಿದ ನಾಯಿ ಶಿಬಿರದಲ್ಲಿ ಹುಚ್ಚು ಹಿಡಿದಂತೆ ದಾಂಧಲೆ ನಡೆಸಿದೆ. ಅಲ್ಲಿದ್ದವರು ನಾಯಿಯನ್ನು ತಡೆಯಲು ಮುಂದಾದಾಗ ಆ ನಾಯಿ ಜನರ ಮೇಲೆಯೇ ದಾಳಿ ಮಾಡಿದೆ. ಈ ನಾಯಿ, ನಾಲ್ಕು ನಾಯಿಗಳು ಸೇರಿದಂತೆ ಮೂರ್ನಾಲ್ಕು ಜನರ ಮೇಲೆ ದಾಳಿ ಮಾಡಿದೆ.

              ರಾಷ್ಟ್ರೀಯ ಕೃಷಿ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಈ ಕಾರ್ಯಕ್ರಮವನ್ನು ಪಶುಸಂಗೋಪನೆ ಇಲಾಖೆ ಆಯೋಜನೆ ಮಾಡಿತ್ತು. ಕಾರ್ಯಕ್ರಮಕ್ಕೆ ಕೃಷ್ಣಗಿರಿ ಜಿಲ್ಲಾಧಿಕಾರಿ ಜಯಚಂದ್ರ ಬಾನುರೆಡ್ಡಿ ಚಾಲನೆ ನೀಡಿದ್ದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries