HEALTH TIPS

ಈ ಗೆಲುವು ನಮಗೆ ಬಂದ ದೊಡ್ಡ ಜವಾಬ್ದಾರಿ: ಸಿಸೋಡಿಯಾ

 

                  ನವದೆಹಲಿ: ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷ (ಎಎಪಿ) ಗೆದ್ದಿರುವುದಕ್ಕೆ ದೆಹಲಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಹರ್ಷ ವ್ಯಕ್ತಪಡಿಸಿದ್ದಾರೆ.

           'ಇದು ಗೆಲುವು ಮಾತ್ರವಲ್ಲ, ನಮಗೆ ಬಂದ ದೊಡ್ಡ ಜವಾಬ್ದಾರಿ' ಎಂದು ಅವರು ನುಡಿದಿದ್ದಾರೆ.

                   ಈ ಬಗ್ಗೆ ಟ್ವೀಟ್ ಮಾಡಿರುವ ಅವರು, 'ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಮೇಲೆ ನಂಬಿಕೆ ಇರಿಸಿದ ದೆಹಲಿಯ ಜನತೆಗೆ ಧನ್ಯವಾದಗಳು. ವಿಶ್ವದ ಅತಿ ದೊಡ್ಡ ಹಾಗೂ ಅತ್ಯಂತ್ಯ ಋಣಾತ್ಮಕವಾದ ಪಕ್ಷವನ್ನು ಮಣಿಸಿ, ನಂಬಿಕಸ್ಥ ಕೇಜ್ರಿವಾಲ್‌ ಅವರನ್ನು ಜನರು ಗೆಲ್ಲಿಸಿದ್ದಾರೆ. ಇದು ನಮಗೆ ಕೇವಲ ಜಯ ಮಾತ್ರವಲ್ಲ. ನಮಗೆ ಬಂದ ದೊಡ್ಡ ಜವಾಬ್ದಾರಿ' ಎಂದು ಅವರು ಹೇಳಿದ್ದಾರೆ.

                     ಇದೇ ಮೊದಲ ಬಾರಿಗೆ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷವು ಅಧಿಕಾರ ಹಿಡಿದಿದೆ. ಆ ಮೂಲಕ ಪಾಲಿಕೆಯಲ್ಲಿ 15 ವರ್ಷಗಳ ಬಿಜೆಪಿ ಪಾರುಪತ್ಯ ಅಂತ್ಯವಾಗಿದೆ.

                ದೆಹಲಿ ವಿಧಾನಸಭೆಯಲ್ಲಿ ಸತತ ಗೆಲುವು ಸಾಧಿಸಿದ್ದರೂ, ಪಾಲಿಕೆಯಲ್ಲಿ ಅಧಿಕಾರ ಪಡೆಯಲು ಎಎಪಿ ವಿಫಲವಾಗಿತ್ತು. ಇದೀಗ 250 ವಾರ್ಡ್‌ಗಳಲ್ಲಿ ಎಎಪಿ 134 ವಾರ್ಡುಗಳನ್ನು ಗೆದ್ದುಕೊಂಡಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries