HEALTH TIPS

ಭಾರತದ ಮೊದಲ ಸಂಪೂರ್ಣ ಸಾಂವಿಧಾನಿಕ ಸಾಕ್ಷರ ಜಿಲ್ಲೆಯಾದ 'ಕೊಲ್ಲಂ':: ಮುಖ್ಯಮಂತ್ರಿ ಘೋಷಣೆ


           ಕೊಲ್ಲಂ: 'ಕೊಲ್ಲಂ' ಭಾರತದ ಮೊದಲ ಸಂಪೂರ್ಣ ಸಾಂವಿಧಾನಿಕ ಸಾಕ್ಷರ ಜಿಲ್ಲೆಯಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧಿಕೃತ ಘೋಷಣೆ ಮಾಡಿದ್ದಾರೆ.
         ಕೇಶವನ್ ಸ್ಮಾರಕ ಪುರಭವನದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು. ಒಂದು ವರ್ಷದೊಳಗೆ ಜಿಲ್ಲೆಯ ಏಳು ಲಕ್ಷ ಕುಟುಂಬಗಳಿಗೆ ಸಂವಿಧಾನದ ಮೂಲ ತತ್ವಗಳನ್ನು ಕಲಿಸಲಾಯಿತು.
          ದೇಶದ ಪ್ರಗತಿಯನ್ನೇ ಗುರಿಯಾಗಿಸಿಕೊಂಡವರು ಅಧಿಕಾರಕ್ಕೆ ಬರಬೇಕಾದರೆ ಮತ ನೀಡುವವರು ಸಂವಿಧಾನದ ಅರಿವು ಹೊಂದಿರಬೇಕು ಎಂದು ಮುಖ್ಯಮಂತ್ರಿ ಹೇಳಿದರು. ಸಂಪೂರ್ಣ ಸಾಂವಿಧಾನಿಕ ಸಾಕ್ಷರತೆಯನ್ನು ಸಾಧಿಸಿದ ಮೊದಲ ಪಂಚಾಯತಿಗಳು ಕುಲತೂಪುಳ ಮತ್ತು ಬ್ಲಾಕ್ ಪಂಚಾಯತ್ ಚವರ ಆಗಿ ಹೊರಹೊಮ್ಮಿದೆ.
        ಕೊಲ್ಲಂ ಜಿಲ್ಲಾ ಪಂಚಾಯತ್ ಮತ್ತು ಕಿಲಾ ಕಳೆದ ವರ್ಷ ಜನವರಿಯಲ್ಲಿ ದಿ ಸಿಟಿಜನ್ ಅಭಿಯಾನವನ್ನು ಪ್ರಾರಂಭಿಸಿತು. 2,000 ತರಬೇತಿ ಪಡೆದ ಸೆನೆಟರ್‍ಗಳು ಹತ್ತರಿಂದ ಇಪ್ಪತ್ತು ಕುಟುಂಬಗಳನ್ನು ಗುಂಪುಗಳಾಗಿ ವಿಂಗಡಿಸಿ ತರಗತಿ ತೆಗೆದುಕೊಂಡಿದ್ದರು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries