ತಿರುವನಂತಪುರಂ: 2 ಲಕ್ಷ ಮೌಲ್ಯದ ಆಂಥೂರಿಯಂ ಗಿಡಗಳನ್ನು ಕದ್ದ ಯುವಕನನ್ನು ಪೋಲೀಸರು ಬಂಧಿಸಿದ್ದಾರೆ.
ಕೊಲ್ಲಂ ಚವರ ಮೂಲದ ವಿನೀತ್ ಕ್ಲೀಟಸ್ ಬಂಧಿತ ಆರೋಪಿ. ಅಮರವಿಲ ಕೊಳ್ಳದಲ್ಲಿ ಮಂಚಮಕುಜಿಯ ಐಆರ್ ಡಿಇ ರಿ. ಅಧಿಕಾರಿ ಜಪಮಣಿ ಅವರ ಪತ್ನಿ ವಿಲಾಸಿನಿಬಾಯಿ ಮನೆಯಲ್ಲಿ ಬೆಳೆಸಿದ್ದ ವಿಶೇಷ ತಳಿಯ ಸುಮಾರು 200 ಆಂಥೂರಿಯಂ ಗಿಡಗಳನ್ನು ವಿನೀತ್ ಕದ್ದಿದ್ದಾನೆ.
2011ರ ಮಾರ್ಚ್ ನಲ್ಲಿ ಹಾಗೂ ಮೂರು ತಿಂಗಳ ಹಿಂದೆ ವಿನೀತ್ ಮಹಿಳೆಯ ವೇಷ ಧರಿಸಿ ಕಳ್ಳತನ ನಡೆಸಿದ್ದು ಸಾಬೀತಾಗಿದೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಜಪಮಣಿ ಮತ್ತು ಅವರ ಪತ್ನಿ ವಿಲಾಸಿನಿ ಬಾಯ್ ಅವರು ಅಲಂಕಾರಿಕ ಸಸ್ಯಗಳ ಆರೈಕೆಗಾಗಿ 2017 ರ ರಾಷ್ಟ್ರಪತಿ ಪ್ರಶಸ್ತಿಗೆ ಭಾಜನರಾದವರು.
ಘಟನೆ ಬಳಿಕ ಆರೋಪಿ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ. ಸಾಮಾಜಿಕ ಜಾಲತಾಣಗಳ ಮೂಲಕ ಗಿಡಗಳನ್ನು ಮಾರಾಟ ಮಾಡುತ್ತಿದ್ದ. ಈ ಹಿಂದೆಯೂ ಇಂತಹ ಕಳ್ಳತನ ಮಾಡಿದ್ದನ್ನು ಪೆÇಲೀಸರು ಪತ್ತೆ ಮಾಡಿದ್ದಾರೆ. ಅªನÀನ್ನು ನೆಯ್ಯಾಟಿಂಕರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಅಂಥೂರಿಯಂ ಕಳ್ಳತನ..!ಮಹಿಳೆ ವೇಷ ಧರಿಸಿ ದುಬಾರಿ ಬೆಲೆಯ ಗಿಡಗಳನ್ನು ಕದ್ದ ವಿನೀತ್ ಬಂಧನ
0
January 13, 2023