HEALTH TIPS

ವಿದ್ಯುತ್ ವಿತರಣಾ ಕ್ಷೇತ್ರದಲ್ಲಿ ಅಭಿವೃದ್ಧಿ ಮತ್ತು ಆವಿಷ್ಕಾರದ ಬಗ್ಗೆ ಕಾರ್ಯಾಗಾರ


              ಕಾಸರಗೋಡು:   ಕೇಂದ್ರ ಸರ್ಕಾರದ ನೆರವಿನೊಂದಿಗೆ ರಾಜ್ಯ ವಿದ್ಯುಚ್ಛಕ್ತಿ ಮಂಡಳಿಯು ಜಾರಿಗೆ ತಂದಿರುವ ಪರಿಷ್ಕøತ ವಿತರಣಾ ವಲಯ ಯೋಜನೆ (ಆರ್.ಡಿ.ಎಸ್.ಎಸ್) ಕುರಿತು ವಿವರಿಸಲು ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. .ಈ ಯೋಜನೆಯು ಉಪ-ಪ್ರಸರಣ ಮತ್ತು ವಿತರಣಾ ಕ್ಷೇತ್ರಗಳನ್ನು ಸುಧಾರಿಸುವ ಗುರಿಯನ್ನು ಹೊಂದಿದೆ, ನಿರಂತರ ಗುಣಮಟ್ಟದ ವಿದ್ಯುತ್ 24*7 ಅನ್ನು ಒದಗಿಸುತ್ತದೆ.  ಆರ್ಥಿಕ ಸುಸ್ಥಿರತೆ, ವಿದ್ಯುತ್ ವಲಯದಲ್ಲಿ ಸುಧಾರಿತ ದಕ್ಷತೆ ಮತ್ತು ವಿಶ್ವಾಸಾರ್ಹತೆ ಲಕ್ಷ್ಯವಾಗಿದೆ.
             ಈ ಯೋಜನೆಗೆ ಸಲ್ಲಿಸಬೇಕಾದ ಕಾಮಗಾರಿಗಳ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲು ಕಾಂಞಂಗಾಡ ವ್ಯಾಗರ್ ಭವನ ಸಭಾಂಗಣದಲ್ಲಿ ನಡೆದ ಕಾರ್ಯಾಗಾರವನ್ನು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಇ.ಚಂದ್ರಶೇಖರನ್ ಶಾಸಕ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಎನ್.ಎ.ನೆಲ್ಲಿಕುನ್ನು, ಎಂ.ರಾಜಗೋಪಾಲನ್, ಸಬ್ ಕಲೆಕ್ಟರ್ ಸುಫಿಯಾನ್ ಅಹಮದ್ ಮಾತನಾಡಿದರು. ಉತ್ತರ ಪ್ರದೇಶ ವಿತರಣಾ ವಿಭಾಗದ ಮುಖ್ಯ ಅಭಿಯಂತರ ಹರೀಶ ಮೋಟಮ್ಮಾಳ್ ವಿಷಯ ಮಂಡಿಸಿದರು. ವಿದ್ಯುತ್ ಮಂಡಳಿ ನಿರ್ದೇಶಕ ಎಸ್.ಆರ್.ಆನಂದ ಸ್ವಾಗತಿಸಿ, ಕಾರ್ಯಪಾಲಕ ಎಂಜಿನಿಯರ್ ಕೆ. ನಾಗರಾಜ ಭಟ್ ವಂದಿಸಿದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries