HEALTH TIPS

ವಿಚಾರಣೆಗೆ ಸಹಕರಿಸದ ಶಿವಶಂಕರ್: ಲಾಕರ್ ತೆಗೆದುಕೊಳ್ಳಲು ಸ್ವಪ್ನಾಗೆ ಸಹಾಯ ಮಾಡಿದ ಚಾರ್ಟರ್ಡ್ ಅಕೌಂಟೆಟ್ ವೇಣುಗೋಪಾಲ್ ಗೆ ನೋಟಿಸ್


              ಕೊಚ್ಚಿ: ಲೈಫ್ ಮಿಷನ್ ಲಂಚ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿಸಲ್ಪಟ್ಟಿರುವ ಮುಖ್ಯಮಂತ್ರಿಗಳ ಮಾಜಿ ಪ್ರಧಾನ ಕಾರ್ಯದರ್ಶಿ ಎಂ. ಶಿವಶಂಕರ್ ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು ವರದಿಯಾಗಿದೆ. ಇದರ ಬೆನ್ನಲ್ಲೇ ಶಿವಶಂಕರ್ ಸ್ನೇಹಿತ ಚಾರ್ಟರ್ಡ್ ಅಕೌಂಟೆಂಟ್ ವೇಣುಗೋಪಾಲ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ.
              ಶುಕ್ರವಾರ ಕೊಚ್ಚಿಯಲ್ಲಿರುವ ಇಡಿ ಕಚೇರಿಗೆ ಹಾಜರಾಗುವಂತೆ ವೇಣುಗೋಪಾಲ್ ಅವರಿಗೆ ಸೂಚಿಸಲಾಗಿದೆ. ಶಿವಶಂಕರನ ಜೊತೆ ಮುಖಾಮುಳಿ ಕುಳಿತು  ಪ್ರಶ್ನಿಸಬಹುದು ಎನ್ನಲಾಗಿದೆ. ಶಿವಶಂಕರ್ ಅವರ ಸೂಚನೆಯಂತೆ ವೇಣುಗೋಪಾಲ್ ಸ್ವಪ್ನಾಗೆ ಲಾಕರ್ ತೆರೆದರು. ಜಂಟಿ ಖಾತೆ ತೆರೆದ ಬಳಿಕ ಶಿವಶಂಕರ್ ಅವರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಸ್ವಪ್ನಾ ತನಿಖಾ ತಂಡದ ಮುಂದೆ ನೀಡಿರುವ ಹೇಳಿಕೆಯಲ್ಲಿ ಹೇಳಲಾಗಿದೆ. ಇಡಿಯ ಈ ನಡೆ ಕೂಡ ಇದನ್ನು ಸ್ಪಷ್ಟಪಡಿಸಲು ಆಗಿದೆ.
          ಯಾವುದೇ ಟೆಂಡರ್ ಪ್ರಕ್ರಿಯೆ ಇಲ್ಲದೆ ಯುನಿಟಚ್ ಗೆ ಲೈಫ್ ಮಿಷನ್ ಗುತ್ತಿಗೆ ನೀಡಲು ಶಿವಶಂಕರ್ 1 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಸ್ವಪ್ನಾ ಬಹಿರಂಗಪಡಿಸಿದ್ದಾರೆ. ಆದರೆ ಅದರ ಬಗ್ಗೆ ತನಗೇನೂ ಗೊತ್ತಿಲ್ಲ ಎಂದು ಶಿವಶಂಕರ್ ತಿಳಿಸಿದ್ದಾರೆ. ಏತನ್ಮಧ್ಯೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಆರೋಪಿಗಳನ್ನು ಬಂಧಿಸುವ ಸೂಚನೆಗಳಿವೆ.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries