HEALTH TIPS

ಕೇರಳ ಮತ್ತು ತಮಿಳುನಾಡು ಜಂಟಿಯಾಗಿ ವೈಕಂ ಸತ್ಯಾಗ್ರಹದ 100ನೇ ವಾರ್ಷಿಕೋತ್ಸವ ಆಚರಿಸುವ ಸಿದ್ದತೆಯಲ್ಲಿ: ಎಂ.ಕೆ. ಸ್ಟಾಲಿನ್ ಮಂಡಿಸಿದ ಪ್ರಸ್ತಾವನೆಯನ್ನು ಅನುಮೋದಿಸಿದ ಪಿಣರಾಯಿ ವಿಜಯನ್


             ತಿರುವನಂತಪುರಂ: ಕೇರಳ ಮತ್ತು ತಮಿಳುನಾಡು ಜಂಟಿಯಾಗಿ ವೈಕಂ ಸತ್ಯಾಗ್ರಹದ 100ನೇ ವμರ್Áಚರಣೆಯನ್ನು ಆಚರಿಸಲಿವೆ.
     ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮಂಡಿಸಿದ ಪ್ರಸ್ತಾವನೆಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಒಪ್ಪಿಕೊಂಡಿದ್ದಾರೆ. ನಾಗರ್‍ಕೋಯಿಲ್‍ನಲ್ಲಿ ನಡೆದ ‘ತೋಳ್ ಶಿಲೈ’ ಮರುಮಗಳ ಹೋರಾಟದ 200ನೇ ವμರ್Áಚರಣೆಯ ಸಂದರ್ಭದಲ್ಲಿ ಪಿಣರಾಯಿ ವಿಜಯನ್ ಮತ್ತು ಎಂಕೆ ಸ್ಟಾಲಿನ್ ವೇದಿಕೆ ಹಂಚಿಕೊಂಡರು. ಪಿಣರಾಯಿ ವಿಜಯನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಂ.ಕೆ. ಸ್ಟಾಲಿನ್ ಮುಖ್ಯ ಅತಿಥಿಯಾಗಿದ್ದರು.
            ಸತ್ಯಾಗ್ರಹ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸುವಂತೆ ಪಿಣರಾಯಿ ಸ್ಟಾಲಿನ್‍ಗೆ ಆಹ್ವಾನ ನೀಡಿದರು. ಸ್ಟಾಲಿನ್ ಅವರನ್ನು ಸಹೋದರ ಎಂದು ಕರೆದಿರುವ ಪಿಣರಾಯಿ, ಸಂಘಪರಿವಾರಕ್ಕೆ ಪ್ರಜಾಪ್ರಭುತ್ವದ ಬಗ್ಗೆ ಅಲರ್ಜಿ ಇದೆ ಎಂದು ಆರೋಪಿಸಿದರು. ಸಂಘ ಪರಿವಾರವು ಬ್ರಾಹ್ಮಣರ ಕಾಲಕ್ಕೆ ಹೋಗುತ್ತದೆ. ಗೋ ಕೇಂದ್ರಿತ ರಾಜಕಾರಣ ಮಾಡಲಾಗುತ್ತಿದೆ. ನಮ್ಮ ದೇಶದಲ್ಲಿ ಇಂದಿಗೂ ಸನಾತನ ಹಿಂದುತ್ವ ಎಂಬ ಪದವನ್ನು ಕೇಳುತ್ತೇವೆ. ಬ್ರಾಹ್ಮಣ್ಯದ ರಾಜಪ್ರಭುತ್ವದ ಯುಗವನ್ನು ಸಂಘಪರಿವಾರ ಗುರಿಯಾಗಿಸುತ್ತಿದೆ ಎಂದು ಪಿಣರಾಯಿ ಹೇಳಿದರು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries