HEALTH TIPS

ರಾಜ್ಯದಲ್ಲಿ ಕೊರೊನಾ ಹರಡುವ ಬಗ್ಗೆ ಆತಂಕ ಬೇಡ: ಎಚ್ಚರಿಕೆ ಸಾಕು: ಆರೋಗ್ಯ ಸಚಿವಾಲಯ


                ತಿರುವನಂತಪುರಂ: ರಾಜ್ಯದಲ್ಲಿ ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಟ್ಟೆಚ್ಚರದ ಸೂಚನೆ ನೀಡಿದೆ.
            ಆತಂಕ ಪಡುವ ಅಗತ್ಯವಿಲ್ಲ ಎಂಬುದು ಸಂಪುಟ ಸಭೆಯ ನಿರ್ಧಾರವಾಗಿದೆ. ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಪರಿಸ್ಥಿತಿಯನ್ನು ವೀಣಾ ಜಾರ್ಜ್ ವಿವರಿಸಿದರು. ಜಿಲ್ಲಾವಾರು ಕಟ್ಟೆಚ್ಚರ ವಹಿಸುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.
          ಆರೋಗ್ಯ ಇಲಾಖೆಯು ದೈನಂದಿನ ಕರೋನಾ ಪ್ರಕರಣಗಳನ್ನು ಪರಿಶೀಲಿಸುತ್ತಿದೆ ಎಂದು ಆರೋಗ್ಯ ಸಚಿವರು ಹೇಳಿದರು. ಆದರೆ ರಾಜ್ಯದಲ್ಲಿ ಯಾವುದೇ ಕೋವಿಡ್ ಕ್ಲಸ್ಟರ್‍ಗಳು ರಚನೆಯಾಗಿಲ್ಲ. ಹೊಸ ರೂಪಾಂತರಗಳು ಹುಟ್ಟಿಕೊಂಡಿವೆಯೇ ಎಂದು ನೋಡಲು ಜೀನೋಮಿಕ್ ಪರೀಕ್ಷೆಗಳು ಹೆಚ್ಚಿಸಲಾಗುತ್ತದೆ.  ವೈದ್ಯಕೀಯ ಕಾಲೇಜುಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿಲ್ಲ. ಅಗತ್ಯ ಪರೀಕ್ಷಾ ಕಿಟ್‍ಗಳು ಮತ್ತು ಔಷಧಿಗಳನ್ನು ಸಿದ್ಧಪಡಿಸಲು ಕೆಎಂಎಸ್‍ಸಿಎಲ್‍ಗೆ ಸೂಚಿಸಲಾಗಿದೆ ಎಂದು ಸಚಿವರು ಹೇಳಿದರು.
         ಕರೋನಾದ ಹೊಸ ರೂಪಾಂತರವು ಹೆಚ್ಚು ಹರಡಬಲ್ಲದು. ಆತ್ಮರಕ್ಷಣೆ ಅತಿಮುಖ್ಯ. ಮಾಸ್ಕ್ ಬಳಕೆಯನ್ನು ಅನುಸರಿಸಬೇಕು. ಇತರೆ ಕಾಯಿಲೆ ಇರುವವರು, ವೃದ್ಧರು, ಮಕ್ಕಳು ಹಾಗೂ ಗರ್ಭಿಣಿಯರು ವಿಶೇಷ ಕಾಳಜಿ ವಹಿಸಬೇಕು ಎಮದು ಸೂಚಿಸಲಾಗಿದೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries