HEALTH TIPS

ಕ್ಷಣಾರ್ಧದಲ್ಲೇ ತಪ್ಪಿತು ಏರ್​ ಇಂಡಿಯಾ-ನೇಪಾಳ ಏರ್​ಲೈನ್ಸ್​ ನಡುವಿನ ದುರಂತ; ಮೂವರು ವಾಯು ಸಂಚಾರ ನಿಯಂತ್ರಕರು ಅಮಾನತು

 

            ಕಠ್ಮಂಡು: ಏರ್​ ಇಂಡಿಯಾ-ನೇಪಾಳ ಏರ್​ಲೈನ್ಸ್​ ನಡುವಿನ ದುರಂತ ಪೈಲಟ್​ಗಳ ಸಮಯ ಪ್ರಜ್ಷೆಯಿಂದ ಕ್ಷಣಾರ್ಧದಲ್ಲೇ ತಪ್ಪಿದ್ದು ದೊಡ್ಡ ದುರಂತದಿಂದ ಪಾರಾಗಲಾಗಿದೆ.

                ಶುಕ್ರವಾರ ಬೆಳ್ಳಗೆ ದೆಹಲಿಯಿಂದ ಕಾಟ್ಮಂಡು ಕಡೆಗೆ ಹೋಗುತ್ತಿದ್ದ ಏರ್​ ಇಂಡಿಯಾ ವಿಮಾನವು, ಕೌಲಲಾಂಪುರದಿಂದ ಕಾಟ್ಮಂಡು ಕಡೆಗೆ ಬರುತ್ತಿದ್ದ ನೇಪಾಳ ಏರ್​ಲೈನ್ಸ್​​​ಗೆ ಸೇರಿದ್ದ A-320 ವಿಮಾನದ ನಡುವೆ ಡಿಕ್ಕಿಯಾಗುವುದು ಸ್ವಲ್ಪದರಲ್ಲೇ ತಪ್ಪಿದೆ.

                   ಏರ್​ ಇಂಡಿಯಾ ವಿಮಾನವು 19,000 ಅಡಿ ಅಂತರದಲ್ಲಿ ಹಾರುತ್ತಿದ್ದ ಸಮಯದಲ್ಲಿ ನೇಪಾಳ ಏರ್​​ಲೈನ್ಸ್​ ವಿಮಾನವು 15,000 ಅಡಿ ಅಂತರದಲ್ಲಿ ಹಾರಾಡುತ್ತಿತ್ತು ಎಂದು ತಿಳಿದು ಬಂದಿದೆ. ಎರಡು ವಿಮಾನಗಳು ಹತ್ತಿರದಲ್ಲಿರುವ ಬಗ್ಗೆ ರಾಡಾರ್​ನಲ್ಲಿ ತೋರಿಸಿದ ಕಾರಣ ನೇಪಾಳ ಏರ್​​ಲೈನ್ಸ್​ ವಿಮಾನವು 7,000 ಅಡಿಗಳಿಗೆ ಕೆಳಗಿಳಿಯಿತ್ತು ಮತ್ತು ದುರಂತ ತಪ್ಪಿತ್ತು ಎಂದು ನೇಪಾಳ ನಾಗರೀಕ ವಿಮಾನಯಾನ ಪ್ರಾಧಿಕಾರ(CAAN)ದ ವಕ್ತಾರರು ತಿಳಿಸಿದ್ಧಾರೆ.

                 ಘಟನೆ ಸಂಬಂಧ CAAN ತನಿಖೆಗೆ ಆದೇಶಿಸಿದ್ದು ನಿಯಂತ್ರಣ ಕೊಠಡಿಯ ಮೂವರು ಅಧಿಕಾರಿಗಳನ್ನು ಅಮಾನತ್ತು ಮಾಡಿರುವುದಾಗಿ ತಿಳಿಸಿದೆ.


 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries