HEALTH TIPS

ಬೇಸಿಗೆಯ ಶಾಖದಿಂದ ಕರಿಬೇವಿನ ಗಿಡ ಸೊರಗಿದೆಯೇ?: ಸುಟ್ಟ ಎಲೆಗಳ ಬದಲಿಗೆ, ಚಿಗುರುಗಳು ಹಸನುಗೊಳ್ಳಲು ಇದನ್ನು ಪ್ರಯತ್ನಿಸಿ..


           ಕರಿಬೇವಿನ ಎಲೆಗಳನ್ನು ಇಷ್ಟಪಡದವರಾರು? ಇದಕ್ಕೊಂದು ಪರ್ಯಾಯ ಬೇರೊಂದಿದಿಯೇ? ಉಪ್ಪಿನಂತೆ ಕರಿಬೇವಿನ ಸೊಪ್ಪು ಕರಾವಳಿ ಮಂದಿಗೆ ಪ್ರಿಯವಾಗಿದೆ. ಬೇಸಿಗೆಯಲ್ಲಂತೂ ಬಳಕೆ ತರಹೇವಾರು.
           ಕರಿಬೇವಿನ ಸೊಪ್ಪು ಬಳಕೆ ಇಲ್ಲದ ಪದಾರ್ಥಗಳಾವುವು? ಆದರೆ ಬಿರು ಬೇಸಿಗೆಯಲ್ಲಿ ಒಣಗುವ ಗಿಡಗಳಲ್ಲಿ ಕರಿಬೇವಿನ ಗಿಡವೂ ಒಂದು. ಮಳೆಗಾಲದಲ್ಲಿ ನಿಧಾನವಾಗಿ ಬೆಳೆದು ಹಸಿರುಗೊಳ್ಳುವ ಕರಿಬೇವಿನ ಗಿಡ ಬಿಸಿಲಿನ ತಾಪಕ್ಕೆ ಅಷ್ಟೇ ಬೇಗನೆ ಒಣಗತೊಡಗುತ್ತದೆ. ಸಾಮಾನ್ಯವಾಗಿ ಗೃಹಿಣಿಯರಿಗೆ ಇದೊಂದು ದೊಡ್ಡ ಬಗೆಹರಿಯದ ವಿಷಯ!
          ಹಾಗಿದ್ದರೆ  ಕುಂಠಿತಗೊಂಡ ಗಿಡವನ್ನು ಮತ್ತೆ ಈ ರೀತಿ ಬೆಳೆಸುವ ಸೂತ್ರದ ಬಗ್ಗೆ ಮಾತನಾಡಲಿದ್ದೇವೆ. ಏನಿಲ್ಲವೆಂದರೂ ಗೆರಟೆ ಸಹವಾಸವೇ ಬೇಕೀಗ ನೋಡಿ!. ಗೆರಟೆ ಎಂದರೆ ಮನೆಯಲ್ಲಿ ನಿತ್ಯ ಸುಡುವ ಅಥವಾ ಕಸದಲ್ಲಿ ಎಸೆಯುವ ವಸ್ತು. ಈ ಗೆರಟೆ ಬಳಸಿ ಗಿಡದ ಸುತ್ತ ಹಸನುಗೊಳಿಸುವುದು ಮೊದಲ ಕೆಲಸ. ಅದರೊಳಗೆ ಗೊಬ್ಬರ ಮತ್ತಿತರ ವಸ್ತುಗಳನ್ನು ಹಾಕಬೇಕು. ಅದಕ್ಕಾಗಿ ವ್ಯಾಪ್ತಿಗೆ ತೆಗೆದುಕೊಳ್ಳಬೇಕು.
           ಹೀಗೆ ಮಾಡುವುದರಿಂದ ಗಿಡಕ್ಕೆ ಎನ್ ಪಿಕೆ ಗೊಬ್ಬರ ದೊರೆಯುತ್ತದೆ. ಮತ್ತು ಸ್ವಲ್ಪ ಬೂದಿ ಮತ್ತು ಮಣ್ಣನ್ನು ಹಾಕಿ. ಆ ನಂತರ  ಗಿಡಕ್ಕೆ ನೀರು, ಬೂದಿ ಹಾಕಬೇಕು. ಹುಳಿ ಗಂಜಿ ನೀರನ್ನು ಗಿಡಕ್ಕೆ ನೀಡುವುದರಿಂದ ಕೀಟಬಾಧೆ ತಡೆಯಬಹುದು. ಈರುಳ್ಳಿ ಸಿಪ್ಪೆಯನ್ನು ಗರಟೆಗೆ ತುಂಬಿಸಬೇಕು. ಇದರ ಮೇಲೆ ಮತ್ತೆ ಬೂದಿ ಸೇರಿಸಿ. ನಂತರ ಮೊಟ್ಟೆಯ ಚಿಪ್ಪು ಮತ್ತು ಬಾಳೆಹಣ್ಣಿನ ಸಿಪ್ಪೆಯನ್ನು ಸೇರಿಸಿ. ಅದರ ಮೇಲೆ ಮಣ್ಣು ಹಾಕಿ. ಇದರ ನಂತರ, ಅದನ್ನು ಹಸಿರು ಹುಲ್ಲು ಅಥವಾ ಯಾವುದನ್ನಾದರೂ ಮುಚ್ಚಿ. ನಂತರ ಗಂಜಿ ನೀರು ಸೇರಿಸಿ. ಇದು ಹೊಸ ಚಿಗುರುಗಳನ್ನು ಉಂಟುಮಾಡುತ್ತದೆ ಮತ್ತು ಸಸ್ಯವು ಚೆನ್ನಾಗಿ ಬೆಳೆಯುತ್ತದೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries