ಕಾಸರಗೋಡು: ಯೂನಿಯನ್ ಜಾಯಿಂಟ್ ಕೌನ್ಸಿಲ್ ವಿದ್ಯಾನಗರ ವಲಯ ಸಮಾವೇಶ ವಿದ್ಯಾನಗರ ಕಿರು ಕೈಗಾರಿಕೆಗಳ ಸಂಘದ ಸಭಾಂಗಣದಲ್ಲಿ ಜರುಗಿತು. ಸಂಘಟನೆ ರಾಜ್ಯ ಸಮಿತಿ ಉಪಾಧ್ಯಕ್ಷೆ ಎಂ.ಎಸ್.ಸುಗತ ಕುಮಾರಿ ಉದ್ಘಾಟಿಸಿದರು.
ಪ್ರಾದೇಶಿಕ ಸಮಿತಿ ಅಧ್ಯಕ್ಷ ಮಾಧವನ್ ಮಟ್ಟುಮ್ಮಲ್ ಅಧ್ಯಕ್ಷತೆ ವಹಿಸಿದ್ದರು. ಜಾಯಿಂಟ್ ಕೌನ್ಸಿಲ್ ರಾಜ್ಯ ಉಪಾಧ್ಯಕ್ಷ ನರೇಶ್ ಕುಮಾರ್ ಕುನ್ನಿಯೂರು, ರಾಜ್ಯ ಸಮಿತಿ ಸದಸ್ಯರಾದ ವಿ ಭುವನೇಂದ್ರನ್, ಯಮುನಾ ರಾಘವನ್, ಜಿಲ್ಲಾಧ್ಯಕ್ಷ ಸಿ.ಕೆ.ಬಿಜುರಾಜ್, ಜಿಲ್ಲಾ ಜತೆ ಕಾರ್ಯದರ್ಶಿ ಪಿ.ರಾಜನ್ ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಪ್ರಸಾದ್ ಕರುವಾಲಂ ಸಾಂಸ್ಥಿಕ ವರದಿ, ಪ್ರಾದೇಶಿಕ ಕಾರ್ಯದರ್ಶಿ ಮೋಹನನ್ ಎನ್ ಚಟುವಟಿಕೆ ವರದಿ ಹಾಗೂ ಕೋಶಾಧಿಕಾರಿ ಧನೇಶ್ ಆಯ-ವ್ಯಯ ಮಂಡಿಸಿದರು. ಕಾರ್ಯದರ್ಶಿ ಹರಿಕೃಷ್ಣ ವಂದಿಸಿದರು.
ಜಾಯಿಂಟ್ ಕೌನ್ಸಿಲ್ ವಿದ್ಯಾನಗರ ವಲಯ ಸಮಾವೇಶ
0
March 20, 2023