ಕಾಸರಗೋಡು: ಮುಹಿಮ್ಮತ್ ಸಂಸ್ಥಾಪಕ, ಪ್ರಮುಖ ಆತ್ಮೀಯ ಪಂಡಿತ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳರ 17 ನೇ ಉರುಸ್ ಮುಬಾರಕ್ ಹಾಗೂ ಮುಹಿಮ್ಮತ್ ಪದವಿ ಪ್ರದಾನ ಸಮಾರಂಭ ಮಾರ್ಚ್ 2 ರಿಂದ 5 ರ ವರೆಗೆ ಪುತ್ತಿಗೆ ಮುಹಿಮ್ಮತ್ನಲ್ಲಿ ನಡೆಯಲಿದೆ. ಝಿಯಾರತ್, ದೌರತುಲ್ ಖುರ್ ಆನ್, ಮತ ಪ್ರಬಾಷಣ, ರಾತೀಬ್, ತಮಿಳು ಸಮ್ಮೇಳನ, ಸ್ವಲಾತ್ ಮಜ್ಲಿಸ್ ಮುಂತಾದ ವಿವಿಧ ಕಾರ್ಯಕ್ರಮ ನಡೆಯಲಿದೆ ಎಂದು ಉರುಸ್ ಸಮಿತಿ ಅಧ್ಯಕ್ಷ ಅಬ್ದುಸ್ಸಲಾಂ ದಾರಿಮಿ ಕುಬನೂರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಾರ್ಚ್ 2ರಂದು ಬೆಳಗ್ಗೆ 9.30ಕ್ಕೆ ಸ್ವಗತ ಸಮಿತಿ ಅಧ್ಯಕ್ಷ ಪಿ.ಎ ಅಬ್ದುಸ್ಸಲಾಂ ದಾರಿಮಿ ಕುಬನೂರ್ ಧ್ವಜಾರೋಹಣ ನಡೆಸುವರು. ಸಂಜೆ ನಡೆಯುವ ಸಮಾರಂಭದಲ್ಲಿ ಪಲ್ಲಂಗೋಡ್ ಅಬ್ದುಲ್ ಕಾದಿರ್ ಮದನಿಯವರ ಅಧ್ಯಕ್ಷತೆಯಲ್ಲಿ ಬದ್ರುಸ್ಸಾದಾತ್ ಸಯ್ಯಿದ್ ಇಬ್ರಾಹಿಂ ಖಲೀಲುಲ್ ಬುಖಾರಿ ತಂಙಳ್ ಉರುಸ್ ಸಮಾರಂಭ ಉದ್ಘಾಟಿಸುವರು. ಹಾಫಿಳ್ ಮಶ್ಹೂದ್ ಸಖಾಫಿ ಗುಡಲೂರ್ ಧಾರ್ಮಿಕ ಪ್ರವಚನ ನೀಡುವರು. ಸಿ.ಎನ್ ಅಬ್ದುಲ್ ಕಾದಿರ್ ಮಾಸ್ಟರ್ ಅದ್ಯಕ್ಷತೆ ವಹಿಸುವರು.
ಮಾರ್ಚ್ 4ರಂದು ಬೆಳಗ್ಗೆ 9.39ಕ್ಕೆ ತಮಿಳು ಸಮ್ಮೇಳನ ನಡೆಯುವುದು. ಮನ್ಸೂರ್ ಹಾಜಿ ಚೆನೈ ಅಧ್ಯಕ್ಷತೆ ವಹಿಸುವರು. ತಮಿಳುನಾಡು ಮುಸ್ಲಿಂ ಜಮಾಅತ್ ಅಧ್ಯಕ್ಷ ಸಯ್ಯಿದ್ ಅಬ್ದುಲ್ ರಹ್ಮಾನ್ ಅಲ್ ಬುಖಾರಿ ಕಯ್ಯಲ್ ಪಟ್ಟನಂ ಉದ್ಘಾಟಿಸುವರು.
ಮಾರ್ಚ್ 5ರಂದು ಬೆಳಗ್ಗೆ 9ಕ್ಕೆ ವಸ್ತ್ರ ವಿತರಣಾ ಕಾರ್ಯಕ್ರಮವನ್ನು ಮುಹಮ್ಮದ್ ಸಖಾಫಿ ಪರವೂರ್ ಉದ್ಘಾಟಿಸುವರು. ಮಧ್ಯಾಹ್ನ 2ಗಂಟೆಗೆ ಪೂರ್ವ ವಿದ್ಯಾರ್ಥಿ ಸಂಗಮ ನಡೆಯುವುದು.
10ಕ್ಕೆ ನಡೆಯುವ ಮಜ್ಲಿಸಿಗೆ ಸ್ವಾಲಿಹ್ ಸ ಅದಿ ತಲಿಪ್ಪರಂಬ್ ನೇತೃತ್ವ ನೆಡಲಿದ್ದಾರೆ. ಸಯ್ಯಿದ್ ಹಬೀಬುಲ್ ಅಹ್ದಲ್ ತಂಙಳರ ಅಧ್ಯಕ್ಷತೆಯಲ್ಲಿ ಎಸ್.ಪಿ ಹಂಝ ಸಖಾಫಿ ಬಂಟ್ವಾಳ ಉದ್ಘಾಟಿಸುವರು. ಸಂಜೆ 5 ಕ್ಕೆ ನಡೆಯುವ ಪದವಿ ಪ್ರದಾನ ಸಮಾರಂಭವನ್ನು ಸಯ್ಯದ್ ಕೆ.ಎಸ್ ಆಟ್ಟಕೋಯ ತಂಙಳ್ ಕುಂಬೋಲ್ ಉದ್ಘಾಟಿಸುವರು. ಸಯ್ಯಿದ್ ಹಸನುಲ್ ಅಹ್ದಲ್ ತಂಙಳ್ ಅಧ್ಯಕ್ಷತೆ ವಹಿಸುವರು. ಸಮಾರೋಪ ಪ್ರಾರ್ಥನೆಗೆ ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮುತ್ತನ್ನೂರ್ ನೇತೃತ್ವ ನೀಡುವರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹಾಜಿ ಅಮೀರಲಿ ಚೂರಿ, ಅಬ್ದುಲ್ ಖಾದಿರ್ ಸಖಾಫಿ ಕಾಟಿಪ್ಪಾರ, ಅಬ್ದುಲ್ ಕಾದಿರ್ ಸಖಾಫಿ ಮೊಗ್ರಾಲ್, ಮೂಸಾ ಸಖಾಫಿ ಕಳತ್ತೂರ್, ಸಯ್ಯಿದ್ ಹಾಮಿದ್ ಅನ್ವರ್ ಅಹ್ದಲ್ ತಂಙಳ್, ಉಮರ್ ಸಖಾಫಿ ಕರ್ನೂರ್ ಉಪಸ್ಥಿತರಿದ್ದರು.
ಇಂದಿನಿಂದ ಪುತ್ತಿಗೆ ಮುಹಿಮತ್ ಉರುಸ್, ಪದವಿ ಪ್ರದನ ಸಮಾರಂಭ
0
March 01, 2023
Tags