HEALTH TIPS

ಉಭಯ ಸದನಗಳಲ್ಲಿ ಗದ್ದಲ: ಸ್ಪೀಕರ್‌ ಕುರ್ಚಿ ಬಳಿ ಕಾಗದ ಎಸೆದ ಕಾಂಗ್ರೆಸ್‌ ಸದಸ್ಯರು

 

                ನವದೆಹಲಿ: ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ಸದಸ್ಯರ ಪ್ರತಿಭಟನೆ ಸೋಮವಾರವೂ ಮುಂದುವರಿದಿದ್ದು, ಬಜೆಟ್‌ ಅಧಿವೇಶನಕ್ಕೆ ಅಡ್ಡಿಯಾಗಿದೆ. ಉಭಯದ ಸದನಗಳ ಕಲಾಪವನ್ನು ಮುಂದೂಡಲಾಗಿದೆ.

                     ಅದಾನಿ ಹಾಗೂ ರಾಹುಲ್‌ ಗಾಂಧಿ ಅವರ ಅನರ್ಹತೆ ಸಂಬಂಧ ವಿರೋಧ ಪಕ್ಷಗಳ ಸದಸ್ಯರು ಘೋಷಣೆ ಕೂಗಿದರು. ಪರಿಣಾಮ ಕಲಾಪ ನಡೆಸಲಾಗದೆ ಲೋಕಸಭೆ ಕಲಾಪವನ್ನು ಸಂಜೆ 4 ಗಂಟೆಗೆ ಹಾಗೂ ರಾಜ್ಯಸಭೆ ಕಲಾ‍‍ಪವನ್ನು ಮಧ್ಯಾಹ್ನ 2ಗಂಟೆಗೆ ಮುಂದೂಡಲಾಯಿತು.

                      ಲೋಕಸಭೆಯಲ್ಲಿ ದಿನದ ಕಲಾಪ ಆರಂಭವಾದ ಕೂಡಲೇ ಕಪ್ಪು ಅಂಗಿ, ಪಟ್ಟಿ, ಶಾಲು ಧರಿಸಿದ್ದ ವಿರೋಧ ಪಕ್ಷಗಳ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟನೆ ಆರಂಭಿಸಿದರು. ಭಿತ್ತಿ ಪತ್ರ ಹಿಡಿದುಕೊಂಡು ಘೋಷಣೆ ಕೂಗುತ್ತಿದ್ದ ಕಾಂಗ್ರೆಸ್‌ ಸದಸ್ಯರಾದ ಟಿ.ಎನ್‌ ಪ್ರತಾಪನ್‌ ಹಾಗೂ ಹಿಬಿ ಇಡೆನ್‌ ಅವರು, ಆದೇಶ ಪತ್ರಗಳನ್ನು ಹಾಗೂ ಕಪ್ಪು ಪಟ್ಟಿಯನ್ನು ಸ್ಪೀಕರ್‌ ಕುರ್ಚಿಯ ಬಳಿ ತೂರಿದರು.

                  'ನಾನು ಘನತೆಯಿಂದ ಸಂಸತ್‌ ಕಲಾಪವನ್ನು ನಡೆಸಬೇಕು' ಎಂದು ಹೇಳಿದ ಸ್ಪೀಕರ್‌ ಓಂ ಬಿರ್ಲಾ ಲೋಸಕಭೆ ಕಲಾಪವನ್ನು ಸಂಜೆ 4 ಗಂಟೆಗೆ ಮುಂದೂಡಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries