HEALTH TIPS

ಬಿಜೆಪಿಯ ಗುರಿ ಕೇರಳಕ್ಕೆ ಸೃಜನಾತ್ಮಕ ಮತ್ತು ಅಭಿವೃದ್ಧಿ ಆಧಾರಿತ ಆಡಳಿತ ವ್ಯವಸ್ಥೆಯನ್ನು ಒದಗಿಸುವುದು; ತಾತ್ಕಾಲಿಕ ಲಾಭವಲ್ಲ, ಆದರೆ ಶಾಶ್ವತ ಪ್ರಗತಿ: ಅನುರಾಗ್ ಸಿಂಗ್


            ಕೊಚ್ಚಿ: ಕೇರಳಕ್ಕೆ ಸೃಜನಾತ್ಮಕ ಮತ್ತು ಅಭಿವೃದ್ಧಿ ಆಧಾರಿತ ಆಡಳಿತ ವ್ಯವಸ್ಥೆ ಕಲ್ಪಿಸುವುದು ಬಿಜೆಪಿಯ ಗುರಿ ಎಂದು ಕೇಂದ್ರ ಮಾಹಿತಿ ಮತ್ತು ಯುವಜನ ವ್ಯವಹಾರಗಳ ಸಚಿವ ಅನುರಾಗ್ ಸಿಂಗ್ ಠಾಕೂರ್ ಹೇಳಿದ್ದಾರೆ.
         ಕೇರಳ ಅಭಿವೃದ್ಧಿಗೆ ಸಾಕಷ್ಟು ಸಾಮಥ್ರ್ಯವನ್ನು ಹೊಂದಿರುವ ರಾಜ್ಯವಾಗಿದೆ. ಕುತಂತ್ರ ರಾಜಕಾರಣದಿಂದ ರಾಜ್ಯಕ್ಕೆ ಯಾವುದೇ ಪ್ರಯೋಜನವಾಗುವುದಿಲ್ಲ. ತಿಳಿದುಕೊಂಡು ಕ್ರಮ ಕೈಗೊಳ್ಳುವುದು ಅಗತ್ಯ ಎಂದವರು ನಿನ್ನೆ ರಾಜ್ಯಕ್ಕೆ ನೀಡಿದ್ದ ಭೇಟಿಯ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡುತ್ತಿದ್ದರು.
          ಇಲ್ಲಿ ಬೇಕಿರುವುದು ಪ್ರಾಮಾಣಿಕತೆ, ದಕ್ಷತೆ ಮತ್ತು ಸೃಜನಾತ್ಮಕ ಕಲ್ಪನೆಯ ಸರ್ಕಾರ. ಬಿಜೆಪಿ ಮಾತ್ರ ಅದನ್ನು ನೀಡಬಲ್ಲದು. ಬಿಜೆಪಿ ಸಮರ್ಥ ಕಾರ್ಯಕರ್ತರ ಸಾಲನ್ನು ಹೊಂದಿರುವ ಪಕ್ಷ. ಕೇಂದ್ರ ಸೇರಿದಂತೆ ಎಲ್ಲೆಲ್ಲೂ ಬಿಜೆಪಿ ಅಧಿಕಾರಕ್ಕೆ ಬಂದಿರುವುದು ಸಾಬೀತಾಗಿದೆ. ಕೇರಳದಲ್ಲಿ ನಿರಂತರ ಆರೋಪಗಳಿದ್ದರೂ ಮುಖ್ಯಮಂತ್ರಿ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂಬ ಕಾರಣಕ್ಕೆ ಹೊಂದಾಣಿಕೆ ರಾಜಕಾರಣ ಮಾಡುವುದರಲ್ಲಿ ಅರ್ಥವಿಲ್ಲ. ಇಡಿ ಮತ್ತು ನ್ಯಾಯಾಲಯಗಳು ಸೇರಿದಂತೆ ತನಿಖಾ ಸಂಸ್ಥೆಗಳು ತಮ್ಮ ಕೆಲಸವನ್ನು ಮುಂದುವರೆಸುತ್ತವೆ. ಕೇಂದ್ರ ಸರಕಾರವಾಗಲಿ, ಆಡಳಿತ ಪಕ್ಷವಾಗಲಿ ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಕೇರಳದೊಂದಿಗೆ ರಾಜಿ ಎಂದು ಆರೋಪಿಸುವವರು ದೆಹಲಿ ಮತ್ತು ಬಿಹಾರದಲ್ಲಿ ನಾಯಕರ ವಿರುದ್ಧದ ಕ್ರಮವನ್ನು ರಾಜಕೀಯ ಸೇಡು ಎಂದು ಕರೆಯುತ್ತಾರೆ.
           ಆಮ್ ಆದ್ಮಿ ಪಕ್ಷವು ಭ್ರμÁ್ಟಚಾರದ ವಿರುದ್ಧ ಘೋಷಣೆಯನ್ನು ಮಂಡಿಸಿತು. ಇಂದು ಅವರ ಮಂತ್ರಿಗಳೂ ಸೇರಿದಂತೆ ಭ್ರμÁ್ಟಚಾರ ಪ್ರಕರಣಗಳಲ್ಲಿ ಜೈಲು ಸೇರಿದ್ದಾರೆ. ಪ್ರಕಾರಗಳನ್ನು ಬದಲಾಯಿಸುವುದು ಶುದ್ಧ ರಾಜಕೀಯವಲ್ಲ. ಇದು ಉಳಿವಿಗಾಗಿ ರಾಜಕೀಯ ಆಟವಾಗಿದೆ. ಅದು ಬಿಜೆಪಿಯ ಶೈಲಿಯಲ್ಲ.
           ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಮನವರಿಕೆ ಮಾಡುವ ಅಗತ್ಯವಿಲ್ಲ. ಜನರು ವಿಷಯಗಳನ್ನು ಗುರುತಿಸುವ ಸಾಮಥ್ರ್ಯ ಹೊಂದಿದ್ದಾರೆ. ಕೇರಳವೂ ಅದನ್ನು ಅರಿತುಕೊಳ್ಳುವ ಕಾಲವಿದು. ಸುಳ್ಳು ಪ್ರಚಾರಗಳಿಗೆ ಜೀವಿತಾವಧಿ ಇಲ್ಲ. ಬರೀ ಸುಳ್ಳನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ. ಬಿಜೆಪಿಯ ಗುರಿ ತಾತ್ಕಾಲಿಕ ಲಾಭವಲ್ಲ, ಶಾಶ್ವತ ಪ್ರಗತಿ. ದೇಶ ಆ ಕಡೆಗೆ ಸಾಗುತ್ತಿದೆ. ಒಟ್ಟಾರೆ ಜನರ ಕಲ್ಯಾಣವೇ ಮೋದಿ ಸರ್ಕಾರದ ಗುರಿ. ಯಾವುದೇ ಪಕ್ಷಪಾತ ಅಥವಾ ಭೇದಗಳಿಲ್ಲ. ಸರ್ವರಿಗೂ ಅಭಿವೃದ್ಧಿ ಎಂಬುದೇ ಧ್ಯೇಯ. ಅಲ್ಪಸಂಖ್ಯಾತರ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಬಿಜೆಪಿಯ ಸಾಧನೆಯನ್ನು ಇದು ಎತ್ತಿ ತೋರಿಸುತ್ತದೆ ಎಂದು ಕೇಂದ್ರ ಸಚಿವರು ಹೇಳಿದರು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries