ಕಾಸರಗೋಡು: ತಾತ್ಕಾಲಿಕವಾಗಿ ಮುಚ್ಚಿರುವ ರಾಣಿಪುರಂ ಪ್ರವಾಸೋದ್ಯಮ ಕೇಂದ್ರವನ್ನು ಇಂದು (ಮಾರ್ಚ್ 19) ಪುನ ತೆರೆಯಲಾಗುವುದು. ನೀರಿನ ಕೊರತೆಯನ್ನು ನೀಗಿಸಿ ಕೇಂದ್ರವನ್ನು ಪುನ ಕಾರ್ಯ ನಿರ್ವಹಿಸಲು ಜಿಲ್ಲಾ ಪ್ರವಾಸೋದ್ಯಮ ಉತ್ತೇಜನಾ ಮಂಡಳಿ ಹಾಗೂ ವಿಭಾಗೀಯ ಅರಣ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದ್ದರು. ಇದರ ಫಲವಾಗಿ ಮಾರ್ಚ್ 19 ಭಾನುವಾರ ದಿಂದ ರಾಣಿಪುರಂ ಪ್ರವಾಸೋದ್ಯಮ ಕೇಂದ್ರವನ್ನು ಪ್ರವಾಸಿಗರಿಗಾಗಿ ತೆರೆದು ಕೊಡಲಾಗುತ್ತದೆ. ಡಿಟಿಪಿಸಿ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಕೌಂಟರ್ನಲ್ಲಿ ನೀರು ವಿತರಿಸಲಾಗುವುದು.
ಇಂದಿನಿಂದ ರಾಣಿಪುರಂ ಪ್ರವಾಸಪ್ರಿಯರಿಗೆ ಮತ್ತೆ ಮುಕ್ತ
0
March 18, 2023