ಬದಿಯಡ್ಕ: ಎಡನೀರು ಮಠದ ಬ್ರಹ್ಮೆಕ್ಯ ಶ್ರೀ ಕೇಶವಾನಂದ ಭಾರತೀ ಶ್ರೀ ಪಾದಂಗಳವರಿಂದ ಉದ್ಘಾಟನೆಗೊಂಡಿರುವ ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ ಎಡನೀರು' ಸಂಸ್ಥೆ ನೃತ್ಯ, ಸಂಗೀತ, ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ, ವೇದ, ಕಲಾರಂಗಗಳಲ್ಲಿ ಭಾರತೀಯ ಸಂಸ್ಕೃತಿಯನ್ನು ಪ್ರಜ್ವಲಿಸುವಂತೆ ಮಾಡುವ ಸದುದ್ದೇಶವನ್ನು ಹೊಂದಿದೆ. ವಿದ್ಯಾರ್ಥಿ ವೇತನ, ಆರೋಗ್ಯ ವೇತನ, ಸಂಶೋಧನೆ, ಆಟೋಟಗಳಿಗೆ ಪ್ರೋತ್ಸಾಹ, ಗ್ರಂಥ ಪ್ರಕಟಣೆ, ಶಾಲೆ- ಗ್ರಂಥಾಲಯ- ಸಮುದಾಯ ಭವನ ಸ್ಥಾಪನೆ, ಆರೋಗ್ಯ ಶಿಬಿರಗಳನ್ನು ನಡೆಸುವುದು ಹೀಗೆ ಹತ್ತಾರು ಹೆಗ್ಗುರಿಗಳನ್ನು ತನ್ನ ನಡಾವಳಿಯಲ್ಲಿ ಹಮ್ಮಿಕೊಂಡಿದೆ.
ಹತ್ತು ವರ್ಷಗಳಿಂದ ನಡೆದು ಬರುತ್ತಿರುವ ಶಿಬಿರದಲ್ಲಿ ಈಗಾಗಲೇ ಅನೇಕ ಮಕ್ಕಳು ಪಾಲ್ಗೊಂಡಿದ್ದರು.
ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಆಶೀರ್ವಾದದೊಂದಿಗೆ, ನುರಿತ ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನದಲ್ಲಿ ಮೇ 2 ರಿಂದ ಮೇ 6 ರ ವರೆಗೆ ಸಾಹಿತ್ಯ, ಚಿತ್ರಕಲೆ, ಯೋಗ, ನಾಟಕ, ಭಜನೆ, ಕರಕುಶಲ ವಸ್ತುಗಳ ತಯಾರಿ ಮುಂತಾದ ವಿಷಯಗಳ ಶಿಬಿರವನ್ನು ನಡೆಸಲು ತೀರ್ಮಾನಿಸಿದೆ. ಉಚಿತವಾಗಿ ನಡೆಯುವ ಶಿಬಿರಕ್ಕೆ ಭದ್ರತಾ ಠೇವಣಿ 300 ರೂ. ಪಾವತಿಸಬೇಕು. ಐದೂ ದಿನಗಳು ಹಾಜರಾದ ಮಕ್ಕಳಿಗೆ ಕೊನೆಯ ದಿನ ಆ ಮೊತ್ತವನ್ನು ಹಿಂತಿರುಗಿಸಲಾಗುವುದು. ಮಧ್ಯಾಹ್ನ ಭೋಜನದ ವ್ಯವಸ್ಥೆ ಇದೆ. ಶಿಬಿರಾರ್ಥಿಗಳ ವಯೋಮಿತಿ 10 ರಿಂದ 16 ವರ್ಷ. ಹಚ್ಚಿನ ವಿವರಗಳಿಗೆ ವಿದುಷಿ ಅನುಪಮಾ ರಾಘವೇಂದ್ರ (ಸ್ಥಾಪಕಾಧ್ಯಕ್ಷೆ, 9447375191)ಸಂಪರ್ಕಿಸಲು ಕೋರಲಾಗಿದೆ.
ನುರಿತ ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನದಲ್ಲಿ ಮೇ 2 ರಿಂದ ಮೇ 6ರ ತನಕ ಭೂಮಿಕಾ ಪ್ರತಿಷ್ಠಾನದ ವತಿಯಿಂದ ಎಡನೀರಿನಲ್ಲಿ ಕನ್ನಡ ಸಂಸ್ಕೃತಿ ಶಿಬಿರ 11
0
April 08, 2023
Tags