HEALTH TIPS

ಪೆರ್ಲದಲ್ಲಿ ಜ್ಞಾನ ವಿಕಾಸ-2023 ಕಾರ್ಯಾಗಾರ ಆರಂಭ


        ಪೆರ್ಲ: ಪೆರ್ಲದ ಶಿವಾಂಜಲಿ ಕಲಾ ಕೇಂದ್ರದ ವತಿಯಿಂದ ಹಮ್ಮಿಕೊಳ್ಳಲಾದ ಎರಡು ದಿನಗಳ ಜ್ಞಾನ ವಿಕಾಸ-2023 ಭರತನಾಟ್ಯ ಕಾರ್ಯಗಾರಕ್ಕೆ ಶನಿವಾರ ಇಡಿಯಡ್ಕ ಶ್ರೀದುರ್ಗಾಪರಮೇಶ್ವರಿ (ಉಳ್ಳಾಲ್ತಿ) ವಿಷ್ಣುಮೂರ್ತಿ ದೇವಸ್ಥಾನದ ಅನ್ನಪೂರ್ಣ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.



        ಕಾರ್ಯಾಗಾರವನ್ನು ಶಿಕ್ಷಕ, ಭಾಗವತ ಡಾ. ಸತೀಶ್ ಪುಣಿಚಿತ್ತಾಯ ಪೆರ್ಲ  ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ನಾಟ್ಯಶಾಸ್ತ್ರದ ಪೂರ್ಣ ಸ್ವಸ್ವರೂಪವಾದ ಭರತನಾಟ್ಯದ ಸಂವರ್ಧನೆಗಾಗಿ ಇಂತಹ ಕಾರ್ಯಾಗಾರವನ್ನು ಆಯೋಜಿಸುತ್ತಿರುವುದು ಸ್ತುತ್ಯರ್ಹವಾದುದು. ಕ್ಷೇತ್ರದಲ್ಲಿ ನುರಿತವರಿಂದ ನೀಡಲ್ಪಡುವ ವಿಶೇಷ ನಿರ್ದೇಶನಗಳು ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲಕರವಾಗಲಿದೆ ಎಂದರು.


        ದೇವಾಲಯದ ಪ್ರಮುಖರಾದ ಸದಾನಂದ ಕುದ್ವ ಉಪಸ್ಥಿತರಿದ್ದು ಶುಭಾಶಂಸನೆಗೈದರು. ಸಂಪನ್ಮೂಲವ್ಯಕ್ತಿಗಳಾಗಿ ವಿದುಷಿ ವಿದುಷಿ ಸುಮಂಗಲಾ ರತ್ನಾಕರ್ ಉಪಸ್ಥಿತರಿದ್ದರು. ಶಿವಾಂಜಲಿ ಕಲಾ ಕೇಂದ್ರದ  ಕಾರ್ಯದರ್ಶಿ ವಿದುಷಿ ಕಾವ್ಯ ಭಟ್ ಪೆರ್ಲ  ಸ್ವಾಗತಿಸಿ, ವಂದಿಸಿದರು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries