HEALTH TIPS

ಕೆಲಸ ಮತ್ತು ಜೀವನ ಪರಿಸ್ಥಿತಿಗಳನ್ನು ಅರ್ಥಮಾಡಲು ಕೇರಳಕ್ಕೆ ಭೇಟಿ ನೀಡಿದ ಬಂಗಾಳ ರಾಜ್ಯಪಾಲ

              ಕೊಚ್ಚಿ: ಪೆರುಂಬವೂರ್‍ನ ಕಾರ್ಖಾನೆಗಳಿಗೆ ಬಂಗಾಳದ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಭೇಟಿ ನೀಡಿದರು. ಅನ್ಯರಾಜ್ಯ ಕಾರ್ಮಿಕರ ಕೆಲಸದ ಸ್ಥಳ ಮತ್ತು ಜೀವನಶೈಲಿಯನ್ನು ಅರ್ಥಮಾಡಿಕೊಳ್ಳಲು ಭೇಟಿ ನೀಡಲಾಗಿದೆ ಎಂದಿರುವರು.

             ಕೇರಳದಲ್ಲಿರುವ  ಇತರ ರಾಜ್ಯಗಳ ಹೆಚ್ಚಿನ ಶೇಕಡಾವಾರು ಕಾರ್ಮಿಕರಲ್ಲಿ  ಪಶ್ಚಿಮ ಬಂಗಾಳದಿಂದ ಬಂದವರೇ ಅತೀ ಹೆಚ್ಚು. 

          ಕೇರಳದಲ್ಲಿ ಉದ್ಯೋಗದಲ್ಲಿರುವವರ ಕೆಲಸದ ಪರಿಸ್ಥಿತಿಗಳು ಮತ್ತು ಜೀವನ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳಲು ರಾಜ್ಯಪಾಲರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಕೇರಳದಲ್ಲಿರುವ ಪಶ್ಚಿಮ ಬಂಗಾಳದ ಕಾರ್ಮಿಕರಿಗಾಗಿ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುವುದು. ಕಾರ್ಮಿಕರ ಸಮಸ್ಯೆ ಬಗೆಹರಿಸಲು ರಾಜಭವನ ಪೋರ್ಟಲ್ ಆರಂಭಿಸಲಿದೆ.

         ಕಾರ್ಮಿಕರು ತಮ್ಮ ಕುಂದುಕೊರತೆಗಳನ್ನು ಪೋರ್ಟಲ್‍ಗೆ ತಿಳಿಸಬಹುದು. ಕೇರಳದಲ್ಲಿರುವ ಬಂಗಾಳಿಗಳ ಡೇಟಾಬೇಸ್ ಸಿದ್ಧಪಡಿಸಲಾಗುವುದು. ಇದಕ್ಕಾಗಿ ಆಲುವಾ ಯುಸಿ ಕಾಲೇಜಿನ ಸಹಯೋಗದಲ್ಲಿ ಯೋಜನೆ ಸಿದ್ಧಪಡಿಸಲಾಗಿತ್ತು. ಅತಿಥಿ ಕಾರ್ಮಿಕರಿಗಾಗಿ ವಿವಿಧ ಕಲಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ರಾಜ್ಯಪಾಲರು ತಿಳಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries