ಪತ್ತನಂತಿಟ್ಟ: ವಿಷು ಕಣಿ ಉತ್ಸವದ ಹಿನ್ನೆಲೆಯಲ್ಲಿ ಶಬರಿಮಲೆಯಲ್ಲಿ ವ್ಯಾಪಕ ಜನಜಂಗುಳಿ ಕಂಡುಬಂತು. ವಿಷುವತ್ ಸಂಕ್ರಾಂತಿಯ ದಿನದಂದು ಶಬರಿಮಲೆ ದೇವಾಲಯದ ಗರ್ಭಗೃಹ ಬೆಳಿಗ್ಗೆ 4 ಗಂಟೆಗೆ ತೆರೆಯಲಾಗಿತ್ತು.
ದೇವಸ್ಥಾನದ ತಂತ್ರಿ ಕಂಠಾರರ್ ಮಹೇಶ್ ಮೋಹನರ ನೇತೃತ್ವದಲ್ಲಿ ಅರ್ಚಕ ಕೆ.ಜಯರಾಮನ್ ನಂಬೂದಿರಿ ದೇವಸ್ಥಾನದ ಗರ್ಭಗುಡಿ ಬಾಗಿಲು ತೆರೆದು ಪೂಜೆ ಸಲ್ಲಿಸಿದರು.
ನಂತರ ದೇಗುಲದ ಒಳಗಿನ ದೀಪಗಳನ್ನು ಬೆಳಗಿ ಅಯ್ಯಪ್ಪಸ್ವಾಮಿ ವಿಷುಕಣಿ ತೋರಿಸಿದರು. ಬಳಿಕ ಭಕ್ತರಿಗೆ ವಿಷುಕಣಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. 4ರಿಂದ 7ರವರೆಗೆ ವಿಷುಕಣಿ ದರ್ಶನವಿತ್ತು. ದೇವಸ್ಥಾನದ ತಂತ್ರಿ ಹಾಗೂ ಮೇಲ್ಶಾಂತಿ ಅಯ್ಯಪ್ಪ ಭಕ್ತರಿಗೆ ವಿಷು ಉಡುಗೊರೆ(ಕೈನೀಟಂ) ನೀಡಿದರು. ಮಹಾಗಣಪತಿ ಹೋಮವೂ ನಡೆಯಿತು. 7.30ಕ್ಕೆ ಉಷಪೂಜೆ ಹಾಗೂ 8ರಿಂದ 11-30ರವರೆಗೆ ತುಪ್ಪಾಭಿಷೇಕ ನಡೆಯಿತು.
ದೇವಸ್ವಂ ಮಂಡಳಿ ಅಧ್ಯಕ್ಷ ಅಡ್ವ.ಕೆ.ಅನಂತ ಗೋಪನ್, ದೇವಸ್ವಂ ಆಯುಕ್ತ ಬಿ.ಎಸ್.ಪ್ರಕಾಶ್, ಮುಖ್ಯ ಎಂಜಿನಿಯರ್ ಅಜಿತ್ ಕುಮಾರ್ ಮತ್ತು ಶಬರಿಮಲೆ ವಿಶೇಷ ಆಯುಕ್ತ ಮನೋಜ್ ಅವರು ವಿಷುಕಣಿ ದರ್ಶನಕ್ಕಾಗಿ ಶಬರಿಮಲೆಗೆ ಆಗಮಿಸಿದ್ದರು.
ವಿಷು ಕಣಿ ದರ್ಶನಕ್ಕೆ ಶಬರಿಮಲೆಯಲ್ಲಿ ಅಪಾರ ಭಕ್ತ ಸಮೂಹ
0
April 15, 2023