ಆಲಪ್ಪುಳ: ಡಿವೈಎಸ್ಪಿ ಕೆ ಹರಿಕೃಷ್ಣನ್ ರೈಲಿಗೆ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ಅವರು ಸೋಲಾರ್ ಪ್ರಕರಣದ ತನಿಖಾಧಿಕಾರಿಯಾಗಿದ್ದರು.
ಇವರು ಹರಿಪಾದ ಮೂಲದವರು. ಹರಿಕೃಷ್ಣನ್ ಪೆರುಂಬವೂರು ಡಿವೈಎಸ್ಪಿಯಾಗಿದ್ದಾಗ ಸೋಲಾರ್ ಪ್ರಕರಣದ ತನಿಖಾಧಿಕಾರಿಯಾಗಿದ್ದರು.
ಕಾಯಂಕುಳಂನ ರಾಮಪುರಂನಲ್ಲಿರುವ ರೈಲ್ವೇ ಕ್ರಾಸಿಂಗ್ನಲ್ಲಿ ಇಂದು ಮುಂಜಾನೆ ಮೃತದೇಹ ಪತ್ತೆಯಾಗಿದೆ. ಟ್ರ್ಯಾಕ್ ಬಳಿ ನಿಲ್ಲಿಸಿದ್ದ ಹರಿಕೃಷ್ಣನ್ ಅವರ ಕಾರಿನಲ್ಲಿ ಆತ್ಮಹತ್ಯೆ ಪತ್ರ ಪತ್ತೆಯಾಗಿದೆ. ಇತ್ತೀಚೆಗೆ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎನ್ನುತ್ತಾರೆ ಸಂಬಂಧಿಕರು. ಅವರ ವಿರುದ್ಧ ವಿಜಿಲೆನ್ಸ್ ಪ್ರಕರಣಗಳೂ ಬಾಕಿ ಇವೆ.