HEALTH TIPS

ವಂದೇಭಾರತ್ ಕೇರಳಕ್ಕೆ ಪರ್ಯಾಯವಲ್ಲ: ಇಂದಲ್ಲದಿದ್ದರೆ ಮುಂದೊಂದು ದಿನ ಸಿಲ್ವರ್‍ಲೈನ್ ಕೇರಳದಲ್ಲಿ ಜಾರಿಯಾಗಲಿದೆ: ಎಂ.ವಿ. ಗೋವಿಂದನ್


              ತಿರುವನಂತಪುರಂ: ಕೇರಳಕ್ಕೆ ಕೆ ರೈಲು ಅತ್ಯಗತ್ಯ. ಇಂದಿಲ್ಲದಿದ್ದರೆ ನಾಳೆಯಾದರೂ ಯೋಜನೆ ಜಾರಿಯಾಗಲಿದೆ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಎಂ.ವಿ.
ಗೋವಿಂದನ್ ಪುನರುಚ್ಚರಿಸಿದ್ದಾರೆ. ವಂದೇ ಭಾರತ್ ಎಕ್ಸ್‍ಪ್ರೆಸ್ ಕೇರಳಕ್ಕೆ ಬಂದಾಗಿನಿಂದಲೂ ರಾಜ್ಯದ ಸಿಪಿಎಂ ನಾಯಕರು ಉನ್ಮಾದದಲ್ಲಿದ್ದಾರೆ. ಆ ಬಳಿಕ ಎಂ.ವಿ. ಗೋವಿಂದ ಹೇಳಿಕೆ ನೀಡಿದ್ದಾರೆ.
        ಕೆ ರೈಲಿಗೆ ವಂದೇಭಾರತ್ ರೈಲು ಪರ್ಯಾಯವಲ್ಲ. ಕೇರಳದ ಭೌಗೋಳಿಕತೆ ಗೊತ್ತಿಲ್ಲದ ಕಾರಣ ಹೀಗೆ ಹೇಳಲಾಗುತ್ತಿದೆ. ಕೇರಳವು ಕೇವಲ ಗಣ್ಯರಿಗೆ ಮಾತ್ರವಲ್ಲದೆ ಜನಸಂಖ್ಯೆಯ ಎಲ್ಲಾ ವರ್ಗಗಳಿಗೆ ಮೀಸಲಾಗಿದೆ. ಕೇರಳದಲ್ಲಿ ಈ ಯೋಜನೆ ಜಾರಿಯಾಗಲಿದೆ. ಸಿಲ್ವರ್ ಲೈನ್ ಯೋಜನೆಯು ಕೇರಳವನ್ನು ದೊಡ್ಡ ನಗರವನ್ನಾಗಿ ಮಾಡುತ್ತದೆ. ವಂದೇಭಾರಕ್ಕೂ ಕೆ ರೈಲಿಗೂ ಯಾವುದೇ ಸಂಬಂಧವಿಲ್ಲ ಎಂದವರು ತಿಳಿಸಿದ್ದಾರೆ. 'ವಂದೇಭಾರತವನ್ನು ಹತ್ತಿ ಅಪ್ಪಂ ಮಾರಾಟಕ್ಕಿಳಿದರೆ ಎರಡು ದಿನಗಳ ನಂತರವಷ್ಟೇ ಗಮ್ಯ ಸ್ಥಾನ ತಲಪಬಲ್ಲಿರಿ ಎಂದ ಎಂವಿ ಅಷ್ಟರಲ್ಲದು ಹಳಸಿಯಾಗಿರುತ್ತದೆ ಎಂದು ಎಂದಿನ ಕುಹಕ ಶೈಲಿಯಲ್ಲಿ ತಿಳಿಸಿರುವರು.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries