HEALTH TIPS

ನಾರಿಚಿನ್ನಾರಿಯಿಂದ ಸರಣಿ ಕಾರ್ಯಕ್ರಮ ರಂಗ ವಸಂತ

  

                    ಕಾಸರಗೋಡು: ಸಾಮಾಜಿಕ, ಸಾಂಸ್ಕøತಿಕ, ಆರ್ಥಿಕ ಕ್ಷೇತ್ರಗಳಲ್ಲಿ ಮಹಿಳೆಯರು ಇಂದು ಸಾಕಷ್ಟು ಸಾಧನೆಯನ್ನು ಮಾಡಿದ್ದು, ಮಹಿಳೆಯರು ಇನ್ನಷ್ಟು ಸಬಲೀಕರಣಗೊಳ್ಳಬೇಕಾಗಿದೆ. ತಮ್ಮ ಕಠಿಣ ಪರಿಶ್ರಮದ ಮೂಲಕ ಎಲ್ಲಾ ಕ್ಷೇತ್ರಗಳಲ್ಲೂ ಮುಂದೆ ಸಾಗುತ್ತಿರುವ ಮಹಿಳೆಯರು ದೇಶದ ಸಮಗ್ರ ಅಭಿವೃದ್ಧಿಯಲ್ಲಿ ತಮ್ಮ ಕೊಡುಗೆ ನೀಡಬೇಕಾಗಿದೆ. ಮಹಿಳೆಯರ ಮತ್ತು ಮಕ್ಕಳ ಸುಪ್ತ ಪ್ರತಿಭೆಯ ಅನಾವರಣಕ್ಕಾಗಿ ನಾರಿ ಚಿನ್ನಾರಿ ವೇದಿಕೆಯನ್ನು ಸೃಷ್ಟಿಸಿದ ರಂಗಚಿನ್ನಾರಿಯನ್ನು ಶ್ಲಾಘಿಸಬೇಕಾಗಿದೆ ಎಂದು ರಂಗನಟಿ, ಚಲನಚಿತ್ರ ನಟಿ ಕಾಂತಾರ ಖ್ಯಾತಿಯ ಪ್ರತಿಮಾ ನಾಯಕ್ ಕುಂದಾಪುರ ಹೇಳಿದರು. 

           ಸಾಮಾಜಿಕ-ಸಾಂಸ್ಕøತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು ಇದರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ರಂಗಚಿನ್ನಾರಿಯ ಮಹಿಳಾ ಘಟಕ ನಾರಿ ಚಿನ್ನಾರಿಯ ನಾಲ್ಕನೇ ಸರಣಿ ಕಾರ್ಯಕ್ರಮ ರಂಗ ವಸಂತ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. 

            ಕರಂದಕ್ಕಾಡು ಪದ್ಮಗಿರಿ ಕಲಾಕುಟೀರದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ನಾರಿಚಿನ್ನಾರಿ ಗೌರವಾಧ್ಯಕ್ಷೆ  ತಾರಾ ಜಗದೀಶ್ ಅಧ್ಯಕ್ಷತೆ ವಹಿಸಿದರು. ಗಮಕಿ, ವಾಗ್ಮಿ ಜಯಲಕ್ಷ್ಮಿ ಕಾರಂತ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಕ್ಕಳ ಪೋಷಣೆಯಲ್ಲಿ ಹೆತ್ತವರ ಪಾತ್ರ ಎಂಬ ವಿಷಯದಲ್ಲಿ ಸಂವಾದ ನಡೆಸಿದರು. ಇದೇ ಸಂದರ್ಭದಲ್ಲಿ ನಾಟಿ ವೈದ್ಯೆ ಯಮುನ ಕೆ.ಶೆಟ್ಟಿ ಅವರಿಗೆ ಗೌರವಾರ್ಪಣೆ ನಡೆಯಿತು.  

           ಗೀತ ಪ್ರಿಯ(ಕೂಚುಪುಡಿ), ಶ್ಯಾಮಲ ರವಿರಾಜ್ ಕುಂಬಳೆ(ಕಾವ್ಯಧಾರೆ), ಶಾರಿಕ(ಕಥೆ ಹೇಳುವುದು), ಅನ್ವಿತಾ ತಲ್ಪನಾಜೆ(ಶಾಸ್ತ್ರೀಯ ಸಂಗೀತ), ಸನ್ನಿಧಿ ಪಳ್ಳತ್ತಡ್ಕ(ಯೋಗ ಪ್ರದರ್ಶನ), ಸರೋಜಿನಿ ಟೀಚರ್(ಹರಿಕಥೆ), ಬಬಿತಾ ರವಿಚಂದ್ರ(ಭಕ್ತಿಗೀತೆ), ಸರ್ವಮಂಗಳ (ಹಾಸ್ಯ ಲಹರಿ), ಮೀರಾ ಹರೀಶ್, ನಳಿನಾಕ್ಷಿ(ಪ್ರಹಸನ), ಜಯಲಕ್ಷ್ಮಿ ಕಾರಂತ್(ಸಂವಾದ) ಮೊದಲಾದವರು ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನೀಡಿದರು. ದಿವ್ಯಾ ಗಟ್ಟಿ ಪರಕ್ಕಿಲ ಸ್ವಾಗತಿಸಿದರು. ವೀಣಾ ಅರುಣ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries