HEALTH TIPS

ಎನ್‍ಸಿಇಆರ್‍ಟಿ ಮರುಸಂಘಟನೆಯಾಗಬೇಕು: ಪೂರಕ ಪಠ್ಯಪುಸ್ತಕ ಬಿಡುಗಡೆ ಮಾಡಲಾಗುವುದು: ವಿ.ಶಿವನ್‍ಕುಟ್ಟಿ


            ತಿರುವನಂತಪುರ: ಪಠ್ಯಕ್ರಮವನ್ನು ಪರಿಷ್ಕರಿಸುವ ಭಾಗವಾಗಿ ಎನ್‍ಸಿಇಆರ್‍ಟಿಯ 12ನೇ ತರಗತಿಯ ಪಠ್ಯಪುಸ್ತಕದಿಂದ ಮೊಘಲ್ ಸಾಮ್ರಾಜ್ಯಕ್ಕೆ ಸಂಬಂಧಿಸಿದ ವಿಭಾಗಗಳನ್ನು ತೆಗೆದುಹಾಕಿರುವುದು ಆಕ್ಷೇಪಾರ್ಹ ಎಂದು ಶಿಕ್ಷಣ ಸಚಿವ ವಿ.ಶಿವನ್‍ಕುಟ್ಟಿ ಹೇಳಿದ್ದಾರೆ.
           ಪ್ರತಿ ರಾಜ್ಯದ ಪ್ರತಿನಿಧಿಗಳೊಂದಿಗೆ ಎನ್‍ಸಿಇಆರ್‍ಟಿಯನ್ನು ಪುನರ್‍ರಚಿಸಬೇಕೆಂದು ಸಚಿವರು ಆಗ್ರಹಿಸಿದರು. ರಾಜ್ಯ ಸರ್ಕಾರದ ಆಕ್ಷೇಪವನ್ನು ಪರಿಗಣಿಸದಿದ್ದರೆ ಪೂರಕ ಪಠ್ಯಪುಸ್ತಕ ಸಿದ್ಧಪಡಿಸಲಾಗುವುದು ಎಂದು ವಿ.ಶಿವನ್‍ಕುಟ್ಟಿ ಸವಾಲು ಹಾಕಿರುವರು.
            ''ಎನ್‍ಸಿಇಆರ್‍ಟಿ ಈಗ ಮಾಡುತ್ತಿರುವುದನ್ನು ಯಾವುದೇ ಸಂದರ್ಭದಲ್ಲೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. 6ನೇ ತರಗತಿಯಿಂದ ಪಠ್ಯಪುಸ್ತಕಗಳಿಂದ ಕಎಲವು ವಿಭಾಗಗಳನ್ನು ಕತ್ತರಿಸಲಾಗುತ್ತಿದೆ. ಇದು ಆರೆಸ್ಸೆಸ್ ಮತ್ತು ಬಿಜೆಪಿಯ ಅಜೆಂಡಾವನ್ನು ಜಾರಿಗೆ ತರುವ ಪ್ರಯತ್ನವಾಗಿದೆ. ಇದನ್ನು ಕೇರಳ ಯಾವುದೇ ರೀತಿಯಲ್ಲಿ ಒಪ್ಪುವುದಿಲ್ಲ.
         ಈ ನಿಟ್ಟಿನಲ್ಲಿ ಎನ್ ಸಿಇಆರ್ ಟಿಯನ್ನೇ ಪುನರ್ ಸಂಘಟಿಸಬೇಕೆಂಬುದು ರಾಜ್ಯದ ಆಗ್ರಹವಾಗಿದೆ. ಮಹಾತ್ಮಾ ಗಾಂಧಿಯನ್ನು ಹೊರಗಿಡಲಾಗಿದೆ ಎಂದು ಹೇಳಿದರೆ, ಅದನ್ನು ಕಾರ್ಯಗತಗೊಳಿಸಲು ಯಾವುದೇ ಬಾಧ್ಯತೆ ಇಲ್ಲ. ಪರ್ಯಾಯ ಪಠ್ಯಪುಸ್ತಕಗಳನ್ನು ಪ್ರಸ್ತುತ ನಿರ್ಧರಿಸಲಾಗಿಲ್ಲ. ಆದರೆ, ರಾಜ್ಯ ಸರ್ಕಾರದ ಆಕ್ಷೇಪವನ್ನು ಪರಿಗಣಿಸದಿದ್ದರೆ ಪೂರಕ ಪಠ್ಯಪುಸ್ತಕ ಸಿದ್ಧಪಡಿಸುವ ಕುರಿತು ಪರಿಶೀಲಿಸಲಾಗುವುದು’ ಎಂದು ವಿ.ಶಿವನ್Àಕುಟ್ಟಿ ಹೇಳಿದರು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries