HEALTH TIPS

ವಿಡಿಯೋ ನೋಡುವಾಗ ಮೊಬೈಲ್​ ಸ್ಫೋಟ: ದಂಪತಿಯ ಒಬ್ಬಳೇ ಮುದ್ದಿನ ಪುತ್ರಿ ಸಾವು

               ತ್ರಿಸ್ಸೂರ್​: ಮೊಬೈಲ್​ ಸ್ಫೋಟಗೊಂಡು 8 ವರ್ಷದ ಬಾಲಕಿ ದುರಂತ ಸಾವಿಗೀಡಾಗಿರುವ ಘಟನೆ ಕೇರಳದ ತ್ರಿಸ್ಸೂರ್​ ಜಿಲ್ಲೆಯ ತಿರುವಿಲವಮಲದಲ್ಲಿ ನಡೆದಿದೆ.

           ಮೃತ ಬಾಲಕಿಯನ್ನು ಆದಿತ್ಯಶ್ರೀ ಎಂದು ಗುರುತಿಸಲಾಗಿದೆ. ಪಟ್ಟಿಪರಂಬು ಕುನ್ನತು ವಿತ್ತಿಲ್ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಅಶೋಕ್​​ ಕುಮಾರ್​ ಮತ್ತು ಸೌಮ್ಯ ದಂಪತಿಯ ಒಬ್ಬಳೇ ಪುತ್ರಿ.

ಕ್ರಿಸ್ಟ್​ ನ್ಯೂ ಲೈಫ್​ ಸ್ಕೂಲ್​​​ನಲ್ಲಿ ಮೂರನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು.

            ಈ ಘಟನೆ ಕಳೆದ ರಾತ್ರಿ ನಡೆದಿದೆ. ಮೊಬೈಲ್​ ಅನ್ನು ಚಾರ್ಜ್​ ಹಾಕಿದ್ದ ವೇಳೆ ಆದಿತ್ಯಶ್ರೀ ವಿಡಿಯೋ ನೋಡುತ್ತಿದ್ದಳು. ಈ ವೇಳೆ ಮೊಬೈಲ್​ ಸ್ಫೋಟಗೊಂಡು ಆಕೆ ದುರ್ಮರಣಕ್ಕೀಡಾಗಿದ್ದಾಳೆ. ಸ್ಫೋಟದ ಸದ್ದು ನಮಗೂ ಕೇಳಿಸಿತು ಎಂದು ನೆರೆ ಮನೆಯವರು ಹೇಳಿದ್ದಾರೆ.

               ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪಳೆಯನ್ನೂರು ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ಆದಿತ್ಯಾಶ್ರೀ ಮೃತದೇಹವನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries