ನವದೆಹಲಿ (PTI): ವಾಯುವ್ಯ ದೆಹಲಿಯಲ್ಲಿ ಉದ್ಯಮಿಯೊಬ್ಬರ ಮನೆಗೆ ನುಗ್ಗಿದ ಐವರು ಶಸ್ತ್ರಸಜ್ಜಿತ ದರೋಡೆಕೋರರು ₹1.3 ಕೋಟಿ ಹಣ ಮತ್ತು 2 ಕೆ.ಜಿ.ಚಿನ್ನವನ್ನು ದೋಚಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ನವದೆಹಲಿ (PTI): ವಾಯುವ್ಯ ದೆಹಲಿಯಲ್ಲಿ ಉದ್ಯಮಿಯೊಬ್ಬರ ಮನೆಗೆ ನುಗ್ಗಿದ ಐವರು ಶಸ್ತ್ರಸಜ್ಜಿತ ದರೋಡೆಕೋರರು ₹1.3 ಕೋಟಿ ಹಣ ಮತ್ತು 2 ಕೆ.ಜಿ.ಚಿನ್ನವನ್ನು ದೋಚಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಉದ್ಯಮಿಯು ಅಶೋಕ್ ವಿಹಾರ್ನ ನಿವಾಸಿಯಾಗಿದ್ದು, ಪೇಪರ್ ಟ್ರೇಡಿಂಗ್ ವ್ಯವಹಾರವನ್ನು ಹೊಂದಿದ್ದಾರೆ. ಅವರ ತಂದೆ ಗುತ್ತಿಗೆದಾರರಾಗಿದ್ದರು.
ಮುಸುಕುಧಾರಿ ದರೋಡೆಕೋರರು ಶನಿವಾರ ಮುಂಜಾನೆ ಕಿಟಕಿಯ ಗ್ರಿಲ್ಗಳನ್ನು ಕತ್ತರಿಸಿ ಮನೆಗೆ ನುಗ್ಗಿದ್ದಾರೆ. ಕುಟುಂಬ ಸದಸ್ಯರನ್ನು ಎಚ್ಚರಿಸಿ ಅವರಿಗೆ ಬಂದೂಕು ತೋರಿಸಿ ಕೋಣೆಯಲ್ಲಿ ಒತ್ತೆಯಾಳಾಗಿ ಇರಿಸಿಕೊಂಡಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸರಿಗೆ ವಿಷಯ ತಿಳಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕುಟುಂಬ ಸದಸ್ಯರಿಗೆ ದರೋಡೆಕೋರರು ಬೆದರಿಕೆ ಹಾಕಿದ್ದರು. ಕುಟುಂಬಸ್ಥರು ಬಿಡಿಸಿಕೊಂಡು ಬಂದು ದೂರು ನೀಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.