HEALTH TIPS

ಮಧ್ಯಪ್ರದೇಶ: ಸೇತುವೆಯಿಂದ ಬಸ್‌ ಬಿದ್ದು 22 ಮಂದಿ ಸಾವು

                ರ್ಗೋನ್/ಭೋಪಾಲ್ (PTI): ಖರ್ಗೋನ್‌ ಜಿಲ್ಲೆಯ ಡೊಂಗರಗಾಂವ್ ಗ್ರಾಮದ ಬಳಿ ಖಾಸಗಿ ಬಸ್‌ವೊಂದು ಸೇತುವೆಯಿಂದ ಮಂಗಳವಾರ ಬಿದ್ದ ಪರಿಣಾಮ 22 ಮಂದಿ ಮೃತಪಟ್ಟು, ಇತರ 20 ಜನರು ಗಾಯಗೊಂಡಿದ್ದಾರೆ.

               'ಗ್ರಾಮದ ಬಳಿಯ ಬೋರದ್ ನದಿ ಸೇತುವೆ ತಡೆಗೋಡೆಗೆ ಬಸ್‌ ಡಿಕ್ಕಿ ಹೊಡದಿದೆ.

ಡಿಕ್ಕಿ ರಭಸಕ್ಕೆ ಸೇತುವೆಯ ತಡೆಗೋಡೆ ಧ್ವಂಸಗೊಂಡು, ಬಸ್‌ ಬಿದ್ದಿದೆ' ಎಂದು ಗೃಹ ಸಚಿವ ನರೋತ್ತಮ ಮಿಶ್ರಾ ತಿಳಿಸಿದ್ದಾರೆ.


              'ಘಟನೆ ಕುರಿತು ನ್ಯಾಯಾಧೀಶರಿಂದ ತನಿಖೆಗೆ ಆದೇಶಿಸಲಾಗಿದೆ. ಗಾಯಗೊಂಡವರನ್ನು ಖರ್ಗೋನ್‌ ಆಸ್ಪತ್ರೆಗೆ ದಾಖಲಿಸಲಾಗಿದೆ' ಎಂದೂ ತಿಳಿಸಿದ್ದಾರೆ.

               ಪರಿಹಾರ ಘೋಷಣೆ: ಬಸ್‌ ಅಪಘಾತದಲ್ಲಿ ಮೃತಪಟ್ಟರ ಕುಟುಂಬಕ್ಕೆ ಮುಖ್ಯಮಂತ್ರಿ ಶಿವರಾಜ್‌ ಸಿಂಗ್ ಚೌಹಾಣ್‌ ಅವರು ತಲಾ ₹ 4 ಲಕ್ಷ ಪರಿಹಾರ ಘೋಷಿಸಿದ್ದಾರೆ.

 ಮಧ್ಯಪ್ರದೇಶ ಖರ್ಗೋನ್‌ ಜಿಲ್ಲೆಯ ಡೊಂಗರಗಾಂವ್ ಗ್ರಾಮದ ಬಳಿ ಸೇತುವೆಯಿಂದ ಖಾಸಗಿ ಬಸ್‌ ಮಂಗಳವಾರ ಉರುಳಿ ಬಿದ್ದಿರುವುದು -ಎಎಫ್‌ಪಿ ಚಿತ್ರ

                ಗಂಭೀರ ಗಾಯಗೊಂಡವರಿಗೆ ₹ 50 ಸಾವಿರ, ಸಣ್ಣ ಪ್ರಮಾಣದ ಗಾಯಗಳಾಗಿರುವವರಿಗೆ ₹ 25 ಸಾವಿರ ಪರಿಹಾರ ನೀಡಲಾಗುವುದು. ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಸಚಿವ ಮಿಶ್ರಾ ತಿಳಿಸಿದ್ದಾರೆ.

             ಮೋದಿ ಸಂತಾಪ: ಖರ್ಗೋನ್‌ ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟವರಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

                  'ಪ್ರಧಾನಿ ನರೇಂದ್ರ ಮೋದಿ ಅವರು ಈ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ ₹ 2 ಲಕ್ಷ ಹಾಗೂ ಗಾಯಗೊಂಡವರಿಗೆ ₹ 50 ಸಾವಿರ ಪರಿಹಾರ ಘೋಷಿಸಿದ್ದಾರೆ' ಎಂದು ಪ್ರಧಾನಿ ಕಚೇರಿ ಟ್ವೀಟ್‌ ಮಾಡಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries