HEALTH TIPS

ರಾಣಾ ಹಸ್ತಾಂತರಕ್ಕೆ ಆದೇಶ; ಭಾರತಕ್ಕೆ ದೊರೆತ ದೊಡ್ಡ ಯಶಸ್ಸು: ಉಜ್ವಲ್‌ ನಿಕ್ಕಂ

                   ಮುಂಬೈ : ಮುಂಬೈ ಮೇಲೆ ನಡೆದ ಭಯೋತ್ಪಾದನಾ ದಾಳಿಯ ಆರೋಪಿ, ಪಾಕಿಸ್ತಾನಿ ಮೂಲದ ಕೆನಡಾದ ಉದ್ಯಮಿ ತಹವೂರ್‌ ರಾಣಾನ ಗಡೀಪಾರಿಗೆ ಅಮೆರಿಕ ನ್ಯಾಯಾಲಯ ಒಪ್ಪಿಗೆ ಸೂಚಿಸಿರುವುದು ಭಾರತಕ್ಕೆ ದೊರೆತ ಬಹುದೊಡ್ಡ ಯಶಸ್ಸು ಎಂದು ಈ ಪ್ರಕರಣದ ವಿಶೇಷ ಸರ್ಕಾರಿ ವಕೀಲ ಉಜ್ವಲ್‌ ನಿಕ್ಕಂ ಅಭಿಪ್ರಾಯಪಟ್ಟಿದ್ದಾರೆ.

             'ಮುಂಬೈನ ವಿಶೇಷ ನ್ಯಾಯಾಲಯದಲ್ಲಿ ನಾನು ಲಷ್ಕರ್‌-ಎ-ತೊಯಿಬಾ ಸಂಘಟನೆಗೆ ಸೇರಿದ ಉಗ್ರ ಡೇವಿಡ್ ಹೆಡ್ಲಿಯನ್ನು ವಿಚಾರಿಸಿದ್ದ ವೇಳೆ ತಹವೂರ್ ರಾಣಾನ ಪಾತ್ರದ ಬಗ್ಗೆ ವಿವರವಾದ ಮಾಹಿತಿ ನೀಡಿದ್ದ. ಉಗ್ರರಿಗೆ ಸಂಚಾರದ ಸೌಲಭ್ಯ ಒದಗಿಸಿದ್ದಲ್ಲದೆ, ಪಾಕಿಸ್ತಾನ ಸೇನೆಯೊಂದಿಗೆ ಆತ ನಿರಂತರ ಸಂಪರ್ಕದಲ್ಲಿದ್ದ. ಅಮೆರಿಕದ ನ್ಯಾಯಾಲಯ ಇದೆಲ್ಲವನ್ನೂ ಪರಿಗಣಿಸಿ ಆತನ ಗಡೀಪಾರಿಗೆ ಒಪ್ಪಿಗೆ ನೀಡಿದೆ' ಎಂದು ನಿಕ್ಕಂ ಪ್ರತಿಕ್ರಿಯಿಸಿದ್ದಾರೆ.

                                             ಪಾಕಿಸ್ತಾನದ ಪಾತ್ರ ಸಾಬೀತಾಗಲಿದೆ : ಫಡಣವೀಸ್‌

                  ಮುಂಬೈ ಮೇಲಿನ ಭಯೋತ್ಪಾದನಾ ದಾಳಿಯ ಹಿಂದೆ ಪಾಕಿಸ್ತಾನದ ಪಾತ್ರ ಇದೆ ಎಂಬ ಭಾರತದ ಆರೋಪವು ಗಡೀಪಾರು ಮೂಲಕ ಭಾರತಕ್ಕೆ ಬರಲಿರುವ ರಾಣಾನ ತನಿಖೆಯ ಮೂಲಕ ಮತ್ತೊಮ್ಮೆ ದೃಢಪಡಲಿದೆ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries