ತಿರುವನಂತಪುರಂ: ಉಪರಾಷ್ಟ್ರಪತಿ ಜಗದೀಪ್ ಧಂಕರ್ ಅವರು ಕೇರಳೀಯರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೇರಳೀಯರು ವಿದ್ಯಾವಂತರು ಮತ್ತು ಶ್ರಮಜೀವಿಗಳಾಗಿದ್ದು, ಅದರ ಫಲಾನುಭವಿಯೂ ಆಗಿದ್ದಾರೆ ಎಂದರು.
ಧನಕರ್ ಸೈನಿಕ ಶಾಲೆಯಲ್ಲಿ ಮಲೆಯಾಳಿ ಶಿPಕಿಯಾಗಿದ್ದು ನಿವೃತ್ತರಾದವರ ಸ್ಮರಣಾರ್ಥ ಏರ್ಪಡಿಸಿದ್ದ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪ್ರಶಾಂತ ಕಡಲತೀರಗಳು, ಹಚ್ಚ ಹಸಿರಿನ ಚಹಾ ತೋಟಗಳು, ವಿಶಿಷ್ಟ ಕಲಾ ಪ್ರಕಾರಗಳು, ವೈವಿಧ್ಯಮಯ ಮಸಾಲೆಗಳು, ಅಲಪ್ಪುಳ ಮತ್ತು ಕೊಲ್ಲಂನ ಪ್ರಶಾಂತ ಹಿನ್ನೀರು, ಪರ್ವತ ಶ್ರೇಣಿಗಳು ಮತ್ತು ತೇಕ್ಕಡಿ ವನ್ಯಜೀವಿ ಅಭಯಾರಣ್ಯವನ್ನು ಹೊಂದಿರುವ ಪ್ರಾಕೃತಿಕ ಸೌಂದರ್ಯದ ನಾಡು - 'ದೇವರ ಸ್ವಂತ ನಾಡಲ್ಲಿ' ಇರಲು ಸಂತೋಷವಾಗಿದೆ. 1978 ರಲ್ಲಿ ಅಭಯಾರಣ್ಯ ಸಂದರ್ಶಿಸಿದ್ದೆಎಂದು ಅವರು ಹೇಳಿದ್ದಾರೆ.
ಕೇರಳವು ತನ್ನ ಮುಂದಾಲೋಚನೆಯ ದೃಷ್ಟಿಕೋನ ಮತ್ತು ಸಾಮಾಜಿಕ ನ್ಯಾಯಕ್ಕೆ ಅಚಲವಾದ ಬದ್ಧತೆಗೆ ಹೆಸರುವಾಸಿಯಾಗಿದೆ. ಪ್ರಗತಿಪರ ಶಾಸನಗಳ ಮೂಲಕ ಈ ಖ್ಯಾತಿಯು ಸ್ಪಷ್ಟವಾಗಿದೆ. ಕೇರಳ ಶಾಸಕಾಂಗವು ಇತರ ಶಾಸಕಾಂಗಗಳು ಗಮನಿಸಬೇಕಾದ ಹಲವಾರು ಪ್ರಗತಿಪರ ಕಾನೂನುಗಳನ್ನು ಹೊಂದಿದೆ. ಕೇರಳ ಶಾಸಕಾಂಗ ಭವನವು ಜನರ ಇಚ್ಛೆ, ಪ್ರಜಾಪ್ರಭುತ್ವದ ಮನೋಭಾವ ಮತ್ತು ಸಂವಿಧಾನದ ಸಾರವನ್ನು ಪ್ರತಿನಿಧಿಸುತ್ತದೆ ಎಂದು ಉಪರಾಷ್ಟ್ರಪತಿ ಹೇಳಿದರು.
ಎರಡು ದಿನಗಳ ಭೇಟಿಗಾಗಿ ಉಪರಾಷ್ಟ್ರಪತಿ ಕೇರಳಕ್ಕೆ ಆಗಮಿಸಿದ್ದಾರೆ. ನಿನ್ನೆ ಉಪರಾಷ್ಟ್ರಪತಿಯನ್ನು ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಸಚಿವರು ಹಾಗೂ ರಾಜ್ಯಪಾಲರು ಬರಮಾಡಿಕೊಂಡರು.
ನಂತರ ಪದ್ಮನಾಭಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು. ವಿಧಾನಸಭೆಯ ರಜತ ಮಹೋತ್ಸವವನ್ನು ಉದ್ಘಾಟಿಸಿದ ನಂತರ, ಉಪರಾಷ್ಟ್ರಪತಿಗಳು ಕಣ್ಣೂರಿಗೆ ತೆರಳುವ ಮಾರ್ಗದಲ್ಲಿ ಕಣ್ಣೂರಿನ ಎಜಿಮಲದಲ್ಲಿರುವ ಭಾರತೀಯ ನೌಕಾ ಅಕಾಡೆಮಿಗೆ (ಐಎನ್ಎ) ಭೇಟಿ ನೀಡಿದರು. ಅಲ್ಲಿ ಅವರು ಕೆಡೆಟ್ಗಳೊಂದಿಗೆ ಸಂವಾದ ನಡೆಸಿದರು. ಬಳಿಕ ಕಣ್ಣೂರಿನ ಪಾನೂರಿನಲ್ಲಿರುವ ತಮ್ಮ ಶಿಕ್ಷಕಿ ರತ್ನಾ ನಾಯರ್ ಅವರನ್ನು ಭೇಟಿ ಮಾಡಿದರು.