HEALTH TIPS

ವೈಪರಿತ್ಯ-ಕಲ್ಲುಚಿಪ್ಪು ಕೃಷಿಗೂ ತಟ್ಟಿದ ಬಿಸಿ: ಬವಣೆ ನೀಗಿಸುವಂತೆ ಸರ್ಕಾಕ್ಕೆ ಅಗ್ರಹ

              ಕಾಸರಗೋಡು: ವಲಿಯಪರಂಬ, ಪಡನ್ನ ಮತ್ತು ತ್ರಿಕರಿಪುರ ಪ್ರದೇಶಗಳಲ್ಲಿನ ಹಿನ್ನಿರಿನಲ್ಲಿ ಕಲ್ಲುಚಿಪ್ಪು ಸಂಗ್ರಹಿಸುವ ದೃಶ್ಯ ಸಾಮಾನ್ಯವಗುತ್ತಿದೆ. ಉತ್ತರ ಮಲಬಾರಿನಲ್ಲಿ ಮಾತ್ರ ಕಂಡುಬರುವ ಕಲ್ಲುಚಿಪ್ಪು ಕೃಷಿ ಈ ಪ್ರದೇಶದಲ್ಲೂ ವ್ಯಾಪಕವಾಗುತ್ತಿದೆ.   

            ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿನ ಹವಾಮಾನ ಮತ್ತು ಭೌಗೋಳಿಕ ವ್ಯವಸ್ಥೆ ಕಲ್ಲುಚಿಪ್ಪು ಕೃಷಿಗೆ ಹೆಚ್ಚಿನ  ಉತ್ತೇಜನ ಲಭಿಸುವಂತಾಗಿದೆ.  ನವೆಂಬರ್ ತಿಂಗಳಲ್ಲಿ ಕರಾವಳಿ ಪ್ರದೇಶಗಳಲ್ಲಿ ಇಳಿಸಲಾದ ಕಲ್ಲುಚಿಪ್ಪು ಕೊಯ್ಲಿಗೆ ಇದು ಸಕಾಲವಾಗಿದ್ದು,  ಮೇ ತಿಂಗಳಲ್ಲಿ ಪ್ರಾರಂಭವಾಗಿ ಜೂನ್ ಮೊದಲ ವಾರದಲ್ಲಿ ಕೊನೆಗೊಳ್ಳಬೇಕಾಗಿದೆ. ಆದರೆ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿತ ಮತ್ತು ಹೆಚ್ಚಿನ ತಾಪಮಾನದಿಂದಾಗಿ ಕಲ್ಲುಚಿಪ್ಪು ಕೊಯ್ಲು ವಿಳಂಬವಾಗುತ್ತಿದೆ.  ಪಡನ್ನ ಗ್ರಾಮ ಪಂಚಾಯಿತಿಯೊಂದರಲ್ಲೇ ಸುಮಾರು 1200 ಕಲ್ಲುಚಿಪ್ಪು ಕೃಷಿಕರಿದ್ದಾರೆ. ಕೋಯಿಕ್ಕೋಡ್, ಮಲಪ್ಪುರಂ, ಮಂಗಳೂರಿನ ಕಲ್ಲುಚಿಪ್ಪು ಕೃಷಿಕರು  ಅಲ್ಲಿಂದಲೇ ಕಲ್ಲುಚಿಪ್ಪು ಬೀಜಗಳನ್ನು ಖರೀದಿಸುತ್ತಾರೆ. ಮಧ್ಯವರ್ತಿಗಳು ಪ್ರತಿ ಚೀಲ ಬೀಜಕ್ಕೆ 7500 ರಿಂದ 9500 ಪಡೆಯುತ್ತಾರೆ. ರೈತರಿಗೆ ಸದ್ಯ ಕೆಜಿಗೆ 250 ರೂ. ಬದಲಾಗಿ 50 ರೂ.ಮಾತ್ರ ಕೈಸೇರುತ್ತಿದೆ.

          ಪಡನ್ನ ಗ್ರಾಮ ಪಂಚಾಯಿತಿ ಅಧ್ಯಕ್ಷ  ಪಿವಿ ಮುಹಮ್ಮದ್ ಅಸ್ಲಮ್ ಅವರು ಕಲ್ಲುಚಿಪ್ಪು ಕ್ರಷಿಕರ ಸಮಕಷ್ಟವನ್ನು ಈಗಾಗಲೇ ಮೀನುಗಾರಿಕಾ ಖಾತೆ ಸಚಿವ ಸಜಿ ಚೆರಿಯನ್ ಅವರ ಗಮನಕ್ಕೆ ತಂದಿದ್ದು,  ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿದ್ದಾರೆ. ಕಲ್ಲುಚಿಪ್ಪು ಕೃಷಿಕರಿಗೆ ಗುಣಮಟ್ಟದ ಬೀಜ ನ್ಯಾಯೋಚಿತ ಬೆಲೆಯಲ್ಲಿ ಸಿಗುವಂತಾಗಲು ಸಕಾರದ ಮಟ್ಟದಲ್ಲಿ ಸಂಗ್ರಹಣಾ ಕೇಂದ್ರ ಸ್ಥಾಪಿಸಬೇಕೆಂಬ ಬೇಡಿಕೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ವ್ಯವಸ್ಥೆಗಳನ್ನು ಸಿದ್ಧಪಡಿಸಿ ರಾಜ್ಯಮಟ್ಟದಲ್ಲಿಯೇ ಮಾದರಿ ಯೋಜನೆಯಾಗಿ ರೂಪಿಸಲು ಸಕಾರ ಆದ್ಯತೆ ನೀಡಲಿದೆ ಎಂದು ಸಚಿವರು ಭರವಸೆ ನೀಡಿರುವುದಾಗಿ ಮುಹಮ್ಮದ್ ಅಸ್ಲಾಂ ತಿಳಿಸಿದ್ದಾರೆ. ಮೀನುಗಾರಿಕೆ ಇಲಾಖೆ ಕಲ್ಲುಚಿಪ್ಪು ಸಂಗ್ರಹ ಕೇಂದ್ರ ನಿರ್ಮಾಣಕ್ಕೆ ಈಗಾಗಲೇ ಚಾಲನೆ ನೀಡಿದೆ. ಮಧ್ಯವರ್ತಿಗಳ ಶೋಷಣೆಗೆ ಕಡಿವಾಣ ಹಾಕಿ ಮೀನುಗಾರಿಕೆ ಇಲಾಖೆಯ ನೇರ ಮಧ್ಯಸ್ಥಿಕೆಯಿಂದ ಬೀಜಗಳ ಮಾರುಕಟ್ಟೆ, ಉತ್ಪಾದನೆ ಮತ್ತು ವಿತರಣೆ ಸಾಧ್ಯವಾಗುವ ರೀತಿಯಲ್ಲಿ ಯೋಜನೆ ಸಿದ್ಧಪಡಿಸುವಂತೆ ಕಲ್ಲುಚಿಪ್ಪು ಕೃಷಿಕರು ಆಗ್ರಹಿಸಿದ್ದಾರೆ.


                       ಮನವಿ:

      ಸನ್ಮನಸ್ಸಿನ ಓದುಗರೇ, ಸಮರಸ ಸುದ್ದಿ ದಿನನಿತ್ಯ ಓದುಗರಿಗೆ ಬಹುತೇಕ ಸಕಾಲಿಕ ಮತ್ತು ಖಚಿತ ವರದಿಗಳಿಂದ ಇಂದಿನ ಆಧುನಿಕ ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ಹೆಮ್ಮೆಯಿಂದ ಪ್ರಕಟಗೊಳ್ಳುತ್ತಿದೆ. ಪ್ರಸ್ತುತ ಸಮಸರಸ ಸುದ್ದಿಯ ಸಮಗ್ರ ತಾಂತ್ರಿಕ ನವೀಕರಣಕ್ಕಾಗಿ ಆರ್ಥಿಕ ಅಡಚಣೆಯಿಂದ ಸಹೃದಯ ಓದುಗರು, ಅಭಿಮಾನಿಗಳು ಕನಿಷ್ಠ 100/- ವಿನಂತಾದರೂ ಹೆಗಲು ನೀಡಿದರೆ ಸಹಕಾರಿಯಾಗುವುದೆಂದು ನಂಬಿದ್ದೇವೆ. ಮೇ.29 ಸೋಮವಾರ ಸಂಜೆ 5ರ ಮೊದಲು ಈ ಸಹಾಯ ನಿಮ್ಮಿಂದ ಲಭ್ಯವಾದಲ್ಲಿ ನಾವು ಅಭಾರಿ. 

    ಸಲ್ಲಿಕೆಯಾಗಬೇಕಾದ ಖಾತೆ ಮಾಹಿತಿ:

      ಗೂಗಲ್ ಪೇ: 7907952070

   ಬ್ಯಾಂಕ್ ವಿವರ: 

    ಸಲ್ಲಿಕೆಯ ನಂತರ ನಮಗೆ(ಮೇಲಿನ ಮೊಬೈಲ್ ಸಂಖ್ಯೆಗೆ) ಮಾಹಿತಿ ನೀಡಿ.

 CANARA BANK
BADIYADKA BRANCH
A/c NUMBER: 0611101029775
IFSC: CNRB0004489

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries