ಕಾಸರಗೋಡು: ಜಿಲ್ಲೆಯ ಬಡ್ಸ್ ಶಾಲೆಗಳು ಮತ್ತು ಎಂಸಿಆರ್ಸಿಗಳಲ್ಲಿ ತೋಟಗಾರಿಕೆ ಚಿಕಿತ್ಸೆ ಲಭ್ಯವಾಗುವಂತೆ ಮಾಡುವುದು ಸಾಮಾಜಿಕ ನ್ಯಾಯ ಇಲಾಖೆಯ ಗುರಿಯಾಗಿದೆ ಎಂದು ಉನ್ನತ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಇಲಾಖೆ ಸಚಿವೆ ಡಾ.ಆರ್.ಬಿಂದು ಹೇಲಿದರು.
ಪಡನ್ನಕ್ಕಾಡ್ ಕೃಷಿ ಕಾಲೇಜಿನಲ್ಲಿ ತೋಟಗಾರಿಕೆ ಚಿಕಿತ್ಸಾ ಯೋಜನೆಯ ಘೋಷಣೆ ಹಾಗೂ ಥೆರಪಿ ಫೆಸಿಲಿಟೇಟರ್ ರಾಜ್ಯ ಮಟ್ಟದ ತರಬೇತಿ ಉದ್ಘಾಟನೆ ಸಮಾರಂಭದಲ್ಲಿ ಸಚಿವರು ಮಾತನಾಡಿದರು.
ಇಲ್ಲಿ ವಿಭಿನ್ನ ರೀತಿಯ ಚಿಕಿತ್ಸೆಯನ್ನು ಪ್ರಯತ್ನಿಸಲಾಗುತ್ತಿದೆ. ಇದು ಫಿಸಿಯೋಥೆರಪಿ ಮತ್ತು ಆಕ್ವಾ ಥೆರಪಿಗೆ ಹೋಲುತ್ತದೆ. ಎಂಡೋಸಲ್ಫಾನ್ ಪ್ರದೇಶವಾದ ಕಾಸರಗೋಡಿನಲ್ಲಿ ಇಂತಹ ಯೋಜನೆಗಳನ್ನು ಜಾರಿಗೊಳಿಸುವುದು ಸಾಮಾಜಿಕ ಇಲಾಖೆಯ ಉದ್ದೇಶವಾಗಿದೆ. ಕೃಷಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಸಾಮಾಜಿಕ ನ್ಯಾಯ ಇಲಾಖೆಯು ಅನುಷ್ಠಾನಗೊಳಿಸಿರುವ ಯೋಜನೆ ಇದಾಗಿದೆ. ಕೃಷಿ ವಿಶ್ವವಿದ್ಯಾನಿಲಯದಲ್ಲಿ ಅಂಗವಿಕಲ ಮಕ್ಕಳಿಗಾಗಿ ಈ ರೀತಿಯ ಉದ್ಯಾನವನ್ನು ಸಿದ್ಧಪಡಿಸಿರುವುದು ಸಂತಸ ತಂದಿದೆ. ಸಾಮಾಜಿಕ ನ್ಯಾಯ ಇಲಾಖೆಯು ಇಂತಹ ಯೋಜನೆಯ ಮೂಲಕ ಪ್ರತಿ ಅಂಗವಿಕಲ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಆ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದೆ. ಇದಕ್ಕಾಗಿ 27.5 ಲಕ್ಷ ರೂ.ಮೀಸಲಿರಿಸಲಾಗಿದೆ. ಸಸ್ಯಗಳ ಆರೈಕೆಯಿಂದ ಅವರ ಮನಸ್ಸು ಮತ್ತು ಮಿದುಳುಗಳನ್ನು ಮತ್ತಷ್ಟು ಉತ್ತೇಜಿಸಬಹುದು. ವಿಕಲಚೇತನ ಮಕ್ಕಳ ಕಲಿಕಾ ಕೇಂದ್ರಗಳು ಇಂದು ಶ್ರೇಷ್ಠತೆಯ ಕೇಂದ್ರಗಳಾಗುತ್ತಿವೆ. ವಿಕಲಚೇತನ ಮಕ್ಕಳಿಗೆ ಉದ್ಯೋಗ ಕಲ್ಪಿಸುವ ಗುರಿಯನ್ನು ಇಲಾಖೆ ಹೊಂದಿದೆ. ವೆಲ್ಲಯಾಣಿ ಕೃಷಿ ಮಹಾವಿದ್ಯಾಲಯದಲ್ಲಿ ಅನುಷ್ಠಾನಗೊಂಡ ಯಶಸ್ವಿ ಯೋಜನೆಯ ಮುಂದುವರಿದ ಭಾಗ ಇದಾಗಿದೆ ಎಂದು ಸಚಿವರು ಹೇಳಿದರು.
ಶಾಸಕ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಪಡನ್ನಕ್ಕಾಡ್ ಕೃಷಿ ಕಾಲೇಜಿನ ಡೀನ್ ಡಾ.ಸಜಿತಾ ರಾಣಿ, ಸಮುದಾಯ ವಿಜ್ಞಾನ ವಿಭಾಗದ ಡಾ.ಜಿ.ಕೆ.ಬೇಳ ಯೋಜನೆ ಬಗ್ಗೆ ವಿವರಿಸಿದರು. ಕಾಞಂಗಾಡು ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತ, ಕೇರಳ ಸಾಮಾಜಿಕ ಭದ್ರತಾ ಮಿಷನ್ ಕಾರ್ಯನಿರ್ವಾಹಕ ನಿರ್ದೇಶಕ ಎ.ಶಿಬು ಸ್ವಾಗತಿಸಿ, ಎಸ್ಐಡಿ ರಾಜ್ಯ ಕಾರ್ಯಕ್ರಮ ವ್ಯವಸ್ಥಾಪಕ ಎಸ್.ಸಹೀರುದ್ದೀನ್ ವಂದಿಸಿದರು.