ಕಾಸರಗೋಡು: ಶಿಕ್ಷಣವು ಕೇರಳ ಮಾದರಿಯ ಮೂಲಾಧಾರವಾಗಿದೆ ಎಂದು ಉನ್ನತ ಶಿಕ್ಷಣ ಸಚಿವೆ ಡಾ.ಆರ್.ಬಿಂದು ಹೇಳಿದರು.
ಬಲ್ಲ ಈಸ್ಟ್ ಸರ್ಕಾರಿ ಪ್ರೌಢಶಾಲೆಯಲ್ಲಿ ವರ್ಷಪೂರ್ತಿ ನಡೆಯುವ ಪ್ಲಾಟಿನಂ ಮಹೋತ್ಸವ ಸಮಾರಂಭವನ್ನು ಸಚಿವರು ಉದ್ಘಾಟಿಸಿ ಮಾತನಾಡಿದರು.
ಈ ಬಾರಿ ಆರು ಲಕ್ಷ ವಿದ್ಯಾರ್ಥಿಗಳು ಸಾರ್ವಜನಿಕ ಶಿಕ್ಷಣ ಶಾಲೆಗಳಿಗೆ ಸೇರಿದ್ದಾರೆ. ದೇಶದಲ್ಲೇ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಏಕೈಕ ರಾಜ್ಯ ಕೇರಳ. ಗುಣಮಟ್ಟದ ಶಿಕ್ಷಣ ಮಕ್ಕಳ ಹಕ್ಕು. ಮಕ್ಕಳಲ್ಲಿನ ಸಾಮಾಜಿಕ ಬದ್ಧತೆ ದೇಶಕ್ಕೆ ಉಪಯೋಗವಾಗಬೇಕು. ಶಿಕ್ಷಕರು ತಮ್ಮ ನೋಟ ಅಥವಾ ಮಾತುಗಳಿಂದ ವಿದ್ಯಾರ್ಥಿಗಳ ಮನಸ್ಸನ್ನು ಕದಡಬಾರದು ಎಂದು ಸಚಿವರು ಸಲಹೆ ನೀಡಿದರು. ವಿದ್ಯಾರ್ಥಿಗಳು ನವ ಕೇರಳದ ಧ್ವಜಧಾರಿಗಳಾಗಬೇಕು ಎಂದು ಸಚಿವರು ಹೇಳಿದರು.
ಶಾಸಕ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿದ್ದರು. ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತಾ ಮಾತನಾಡಿದರು. ಸ್ವಾಗತ ಸಮಿತಿ ಅಧ್ಯಕ್ಷ ಪಿ.ಅಪ್ಪುಕುಟ್ಟನ್ ಸ್ವಾಗತಿಸಿ, ಪ್ರಾಂಶುಪಾಲ ಸಿ.ವಿ.ಅರವಿಂದಾಕ್ಷನ್ ವಂದಿಸಿದರು. ವಿದ್ಯಾರ್ಥಿಗಳ ವಿವಿಧ ಕಲಾಪ್ರದರ್ಶನವೂ ಈ ಸಂದರ್ಭ ನಡೆಯಿತು.