ಕುಂಬಳೆ: ಶಿಕ್ಷಣದ ಜೊತೆಗೆ ಇತರ ವಿಷಯಗಳತ್ತ ಗಮನ ಹರಿಸಿ ಮಕ್ಕಳನ್ನು ಗುರಿಯಾಗಿಸಿಕೊಂಡು ಡ್ರಗ್ಸ್ ಮಾಫಿಯಾ ನಡೆಸುತ್ತಿರುವ ಚಟುವಟಿಕೆಗಳನ್ನು ನಿಲ್ಲಿಸಬೇಕಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.
ಜಿವಿಎಚ್ಎಸ್ಎಸ್ ಶಿರಿಯಾ ಶಾಲೆಯ ನೂತನ ಕಟ್ಟಡವನ್ನು ಆನ್ಲೈನ್ನಲ್ಲಿ ಉದ್ಘಾಟಿಸಿ ಮುಖ್ಯಮಂತ್ರಿಗಳು ಮಾತನಾಡುತ್ತಿದ್ದರು.
ಡ್ರಗ್ಸ್ ಮಾಫಿಯಾಗಳ ಕೈಯಿಂದ ಈಗಾಗಲೇ ಹಲವು ಮಕ್ಕಳು ಮುಕ್ತರಾಗಿದ್ದಾರೆ. ಮಕ್ಕಳಲ್ಲಿನ ಬದಲಾವಣೆಗಳನ್ನು ಶಿಕ್ಷಕರು ಗುರುತಿಸುವಂತಾಗಬೇಕು ಎಂದರು.
ಶಾಸಕ ಎ.ಕೆ.ಎಂ.ಅಶ್ರಫ್ ಫಲಕ ಅನಾವರಣಗೊಳಿಸಿದರು. ಶಾಲಾ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಮುಖ್ಯ ಅತಿಥಿಯಾಗಿದ್ದರು. ಮಂಗಲ್ಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಬೀನಾ ನೌಫಲ್, ಜಿಲ್ಲಾ ಪಂಚಾಯಿತಿ ಸದಸ್ಯ ಗೋಲ್ಡನ್ ರೆಹಮಾನ್ ಮತ್ತಿತರರು ಮಾತನಾಡಿದರು. ಮುಖ್ಯೋಪಾಧ್ಯಾಯ ಶ್ರೀಕುಮಾರ್ ಸ್ವಾಗತಿಸಿ, ಸಿದ್ದೀಕ್ ವಂದಿಸಿದರು.