HEALTH TIPS

ಬದಲಾವಣೆಯ ಹಾದಿಯಲ್ಲಿ ರಾಜ್ಯದಲ್ಲಿ ಸಾರ್ವಜನಿಕ ಶಾಲೆಗಳು; ಮುಖ್ಯಮಂತ್ರಿ: ಜಿಎಚ್ ಎಸ್ ಎಸ್ ಮಂಗಲ್ಪಾಡಿಯ ನೂತನ ಕಟ್ಟಡ ನಾಡಿಗೆ ಸಮರ್ಪಿಸಿ ಅಭಿಮತ

          ಉಪ್ಪಳ: ಸಾರ್ವಜನಿಕ ಶಾಲೆಗಳಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದರಿಂದ ಭಾರತದಲ್ಲಿ ಕೇರಳವು ಅತ್ಯುತ್ತಮ ಶಿಕ್ಷಣ ಕ್ಷೇತ್ರವನ್ನು ಹೊಂದಿದೆ ಎಂದು ಎನ್.ಐ.ಟಿ.ಐ ಆಯೋಗ್ ಶ್ಲಾಘಿಸಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು. 

           ರಾಜ್ಯ ಸರ್ಕಾರದ ಎರಡನೇ ವμರ್Áಚರಣೆಯ ಸಂದರ್ಭದಲ್ಲಿ ನವಕೇರಳ ಕ್ರಿಯಾ ಯೋಜನೆ ವಿದ್ಯಾಕಿರಣ ಮಿಷನ್‍ನ ಅಂಗವಾಗಿ ನೂತನವಾಗಿ ನಿರ್ಮಿಸಲಾದ ಜಿಎಚ್‍ಎಸ್‍ಎಸ್ ಮಂಗಲ್ಪಾಡಿ ಕಟ್ಟಡವನ್ನು ಮಂಗಳವಾರ ಆನ್ ಲೈನ್ ಮೂಲಕ ಉದ್ಘಾಟಿಸಿ ಮುಖ್ಯಮಂತ್ರಿಗಳು ಮಾತನಾಡುತ್ತಿದ್ದರು. 

           ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಎ.ಕೆ.ಎಂ.ಅಶ್ರಫ್ ಫಲಕ ಅನಾವರಣಗೊಳಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತಿ ಸದಸ್ಯ ಗೋಲ್ಡನ್ ರೆಹಮಾನ್, ಮಂಗಲ್ಪಾಡಿ ಗ್ರಾಮ ಪಂಚಾಯತಿ ಸದಸ್ಯ ಇಬ್ರಾಹಿಂ ಪೆರಿಂಗಡಿ, ಮಂಜೇಶ್ವರ ಡಿಪಿಓ ವಿಜಯಕುಮಾರ್, ಎಸ್‍ಎಂಸಿ ಅಧ್ಯಕ್ಷ ಅಬ್ದುಲ್ ನಾಸರ್, ಪಿಟಿಎ ಅಧ್ಯಕ್ಷ ಮುಹಮ್ಮದ್ ಉಪ್ಪಳ ಗೇಟ್ ಮೊದಲಾದವರು ಮಾತನಾಡಿದರು. ಜಿಎಚ್‍ಎಸ್‍ಎಸ್ ಮಂಗಲ್ಪಾಡಿ ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ನಾಯ್ಕ್ ಸ್ವಾಗತಿಸಿ, ಹಿರಿಯ ಸಹಾಯಕ ಆರ್.ರಾಧಾಕೃಷ್ಣ ವಂದಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries