HEALTH TIPS

ನೀರಾಳ ಶ್ರೀಪಿಲಡ್ಕತ್ತಾಯ ದೈವಸ್ಥಾನ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಹಸಿರುವಾಣಿ ಹೊರೆ ಕಾಣಿಕೆ ಸಮರ್ಪಣೆ

          ಮಧೂರು: ನೀರಾಳ ಶ್ರೀ ಪಿಲಡ್ಕತ್ತಾಯ ದೈವಸ್ಥಾನ ಬ್ರಹ್ಮಕಲಶೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗುತ್ತಿದ್ದು  ಇದರ ಅಂಗವಾಗಿ ಮಂಗಳವಾರ ಸಂಜೆ ಹಸಿರುವಾಣಿ ಹೊರೆಕಾಣಿಕೆ ಭವ್ಯ ಮೆರವಣಿಗೆ ಜರಗಿತು. 


              ಪುಳ್ಕೂರು ಶ್ರೀಮಹಾದೇವ ಕ್ಷೇತ್ರದಲ್ಲಿ ಅರ್ಚಕ ಪ್ರಭಾಕರ ಕಾರಂತ ಅವರ ವಿಶೇಷ ಪ್ರಾರ್ಥನೆಯೊಂದಿಗೆ ಚೆಂಡೆ ವಾದ್ಯ ತಾಳ ಮೇಳ ಮುತ್ತುಕೊಡೆಗಳೊಂದಿಗೆ ಹೊರಟ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಗೆ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಧಾರ್ಮಿಕ ಮುಂದಾಳು ಕೆ.ಎನ್.ವೆಂಕಟ್ರಮಣ ಹೊಳ್ಳ,ಉಪಾಧ್ಯಕ್ಷ ರವೀಂದ್ರ ರೈ ಸಿರಿಬಾಗಿಲು, ಸುಬ್ರಾಯ ಹೊಳ್ಳ, ರಾಮಕೃಷ್ಣ ಮಯ್ಯ ಸಿರಿಬಾಗಿಲು, ಪ್ರ.ಕಾರ್ಯದರ್ಶಿ ಕೃಷ್ಣ ಹೊಳ್ಳ ನೀರಾಳ, ಕಾರ್ಯದರ್ಶಿ ಮೋಹನ ಕುಮಾರ ಶೆಟ್ಟಿ ಸಿರಿಬಾಗಿಲು, ಪದ್ಮನಾಭ ಹೊಳ್ಳ, ಅವಿನಾಶ್ ಹೊಳ್ಳ, ವೆಂಕಟ್ರಮಣ ಹೊಳ್ಳ, ಶಂಕರ ಶೆಟ್ಟಿ, ಉಮೇಶ ಶೆಟ್ಟಿ, ಸಜೇಶ್ ಶೆಟ್ಟಿ, ಮಹಿಳಾ ಸಮಿತಿಯ ಸುಮಿತ್ರಾ ಮಯ್ಯ ನೀರಾಳ, ಸಾವಿತ್ರಿ ರೈ, ಶೋಭಾನ, ಸವಿತಾ, ಸರಸ್ವತಿ, ಲತಾ ಮೊದಲಾದವರು ನೇತೃತ್ವ ನೀಡಿದ್ದರು. 


             ಬಳಿಕ ಉಗ್ರಾಣ ಮುಹೂರ್ತ ಹಾಗೂ ಕ್ಷೇತ್ರಕ್ಕೆ  ತಂತ್ರಿವರ್ಯ ಬ್ರಹ್ಮಶ್ರೀ ಉಳಿತ್ತಾಯ ವಿಷ್ಣು ಅಸ್ರರನ್ನು ಸ್ವಾಗತಿಸಲಾಯಿತು. ಬಳಿಕ ದೇವತಾ ಪ್ರಾರ್ಥನೆ, ವಾಸ್ತುಪೂಜೆ, ನೂತನ ನಾಗಬಿಂಬಗಳ ಜಲಾಧಿವಾಸ ಮೊದಲಾದ ವಿವಿಧ ತಾಂತ್ರಿಕ ಕಾರ್ಯಗಳು ಜರಗಿದವು. ಧಾರ್ಮಿಕ ಕಾರ್ಯಕ್ರಮದಂಗವಾಗಿ ಪುಳ್ಕೂರು ಶ್ರೀಮಹಾದೇವ ಭಜನಾ ಸಂಘ ಪುಳ್ಕೂರು, ಶ್ರೀಅಯ್ಯಪ್ಪ ಮಹಿಳಾ ಭಜನಾ ಸಂಘ ಬೆದ್ರಡ್ಕ, ಶ್ರೀಮಹಾದೇವ ಭಜನಾ ಸಂಘ ಪುಳ್ಕೂರು ಅವರಿಂದ ಭಜನಾ ಸೇವೆ ಜರಗಿತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries