HEALTH TIPS

ಒಡಿಶಾದಲ್ಲಿ ನಕ್ಸಲರಿಂದ ಬುಡಕಟ್ಟು ನಾಯಕನ ಕೊಲೆ

                 ಫೂಲ್‌ಬನಿ : 'ಒಡಿಶಾದ ಕಂಧಮಾಲ್‌ ಜಿಲ್ಲೆಯ ಸೌಲಿಪಾಡಾ ಎಂಬ ಗ್ರಾಮದಲ್ಲಿ ಬುಡಕಟ್ಟು ನಾಯಕನೊಬ್ಬನ್ನು ನಕ್ಸಲರು ಗುಂಡಿಟ್ಟು ಕೊಂದಿದ್ದಾರೆ' ಎಂದು ಪೊಲೀಸರು ಗುರುವಾರ ತಿಳಿಸಿದರು.

               'ಮೃತನನ್ನು ಮಾಜಿ ಸರಪಂಚ್‌ ಸುಬಲ್‌ ಕನ್ಹಾರ್‌ ಎಂದು ಗುರುತಿಸಲಾಗಿದೆ.

10ಕ್ಕೂ ಹೆಚ್ಚು ಶಸ್ತ್ರಸಜ್ಜಿತ ಮಾವೋವಾದಿಗಳ ಗುಂಪೊಂದು ಸುಬಲ್‌ ಅವರ ಮನೆಗೆ ನುಗ್ಗಿ, ಅವರನ್ನು ಹಳ್ಳಿಯ ಹೊರವಲಯಕ್ಕೆ ಕರೆದೊಯ್ದು ಕೊಲೆ ಮಾಡಿದೆ' ಎಂದು ಫಿರಿಂಗಿ ಪೊಲೀಸ್‌ ಠಾಣೆಯ ಠಾಣಾಧಿಕಾರಿ ತಪನ್‌ ಕುಮಾರ್ ನಹಕ್‌ ಅವರು ಹೇಳಿದರು.

                'ಸುಬಲ್‌ ಅವರು ಪೊಲೀಸರಿಗೆ ಮಾಹಿತಿದಾರರಾಗಿ ಕೆಲಸ ಮಾಡುತ್ತಿದ್ದರು ಎಂಬ ಅನುಮಾನದ ಮೇಲೆ ಇಂಥ ಘಟನೆ ನಡೆದಿದೆ' ಎಂದರು.

                'ಹಲವು ಬಾರಿ ಮಾವೋವಾದಿಗಳಿಂದ ಬೆದರಿಕೆ ಬಂದಿದ್ದ ಹಿನ್ನೆಲೆಯಲ್ಲಿ ಸುಬಲ್ ಅವರು ಹಳ್ಳಿಯನ್ನು ತೊರೆದು ಕಳೆದ ನಾಲ್ಕು ವರ್ಷಗಳಿಂದ ಬಲ್ಲಿಗುಡ ಎಂಬಲ್ಲಿ ವಾಸಿಸುತ್ತಿದ್ದರು. ಸೌಲಿಪಾಡಾ ಬಳಿ ಹೊಸದಾಗಿ ಸಿಆರ್‌ಪಿಎಫ್‌ ತುಕಡಿಯೊಂದನ್ನು ನಿಯೋಜಿಸಿದ ಹಿನ್ನೆಲೆಯಲ್ಲಿ ಕೆಲವು ತಿಂಗಳ ಹಿಂದೆ ಸುಬಲ್‌ ಗ್ರಾಮಕ್ಕೆ ಮರಳಿದ್ದರು' ಎಂದು ಸ್ಥಳೀಯರು ಹೇಳಿದರು.

ಸುಬಲ್‌ನನ್ನು ಕೊಂದ ಕೂಡಲೇ ಸ್ಥಳೀಯರು ಭಯದಿಂದ ಹಳ್ಳಿಯನ್ನು ತೊರೆದು ಒಡಿಹೋಗಿದ್ದಾರೆ. ಕೊಲೆಗಾರರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries