HEALTH TIPS

ರಾಜ್ಯದ ಐಎಎಸ್ ಮುಖ್ಯಸ್ಥರ ಹುದ್ದೆಗಳಲ್ಲಿ ಹೊಸ ಜವಾಬ್ದಾರಿ ಹಂಚಿಕೆ

           ತಿರುವನಂತಪುರಂ; ರಾಜ್ಯದಲ್ಲಿ ಐಎಎಸ್ ಮುಖ್ಯಸ್ಥರ ಬೃಹತ್ ಪುನಃರಚನೆ ಮಾಡಿ ಸರ್ಕಾರ ಆದೇಶ ನೀಡಿದೆ. ಹಣಕಾಸು ಇಲಾಖೆ ಕಾರ್ಯದರ್ಶಿಯಾಗಿದ್ದ ಬಿಶ್ವನಾಥ್ ಸಿನ್ಹಾ ಅವರು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಲಿದ್ದಾರೆ.

            ವಿ ವೇಣು ಅವರನ್ನು ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡುವ ಸಂದರ್ಭದಲ್ಲಿ ಹೊಸ ಬದಲಾವಣೆಗಳು ಮಾಡಲಾಗಿವೆ. ಕೇಂದ್ರದ ಡೆಪ್ಯುಟೇಶನ್ ಪೂರ್ಣಗೊಳಿಸಿರುವ ರವೀಂದ್ರ ಕುಮಾರ್ ಅಗರ್ವಾಲ್ ಅವರು ಹಣಕಾಸು ಇಲಾಖೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಮುಹಮ್ಮದ್ ಹನೀಶ್ ಅವರಿಗೆ ವೈದ್ಯಕೀಯ ಶಿಕ್ಷಣದ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.

           ಶರ್ಮಿಳಾ ಮೇರಿ ಜೋಸೆಫ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಸ್ತುವಾರಿ ನೋಡಿಕೊಳ್ಳುವರು.  ಕೆ.ಬಿಜು ಅವರು ಪ್ರವಾಸೋದ್ಯಮ ಕಾರ್ಯದರ್ಶಿಯಾಗಿ ಹೆಚ್ಚುವರಿಯಾಗಿ ಜವಾಬ್ದಾರಿ ವಹಿಸಲಿದ್ದಾರೆ. ಎ. ಕೌಶಿಗನ್ ನೂತನ ಭೂ ಕಂದಾಯ ಆಯುಕ್ತರಾಗಿದ್ದಾರೆ. ನೇಮಕಾತಿ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

           ಕೆ.ಎಸ್.ಶ್ರೀನಿವಾಸ್ ಅವರಿಗೆ ಬಂದರು ಇಲಾಖೆಯ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ. ಪರಿಸರ ಇಲಾಖೆಯ ಹೆಚ್ಚುವರಿ ಪ್ರಭಾರಿತ್ವವನ್ನು ಡಾ. ರತನ್ ಯು ಖೇಲ್ಕರ್ ಅವರಿಗೆ ನೀಡಲಾಗಿದೆ.  ಶ್ರೀರಾಮ ಸಾಂಬಶಿವ ರಾವ್ ಅವರಿಗೆ ಹೈನುಗಾರಿಕೆ ಇಲಾಖೆ ಹೊಣೆಯನ್ನೂ ನೀಡಲಾಗಿದೆ. ಬಿ. ಅಬ್ದುಲ್ ನಾಸರ್ ಅವರಿಗೆ ರಾಜ್ಯ ಗೃಹ ಮಂಡಳಿಯ ಉಸ್ತುವಾರಿಯನ್ನೂ ನೀಡಲಾಗಿದೆ. ಕೆ. ಗೋಪಾಲಕೃಷ್ಣ ಅವರಿಗೆ ಹಿಂದುಳಿದ ಅಭಿವೃದ್ಧಿ ಇಲಾಖೆ ನಿರ್ದೇಶಕರ ಹೆಚ್ಚುವರಿ ಪ್ರಭಾರ ಜವಾಬ್ದಾರಿ ನೀಡಲಾಗಿದೆ. ಪ್ರೇಮ್ ಕೃಷ್ಣನ್ ಅವರನ್ನು ಕೇರಳ ಸಾರಿಗೆ ಯೋಜನೆಯ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries